ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ – ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ವಚ್ಚತೆ ಪರಿಶೀಲನೆ…..

Suddi Sante Desk
ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ – ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ವಚ್ಚತೆ ಪರಿಶೀಲನೆ…..

ಹುಬ್ಬಳ್ಳಿ

ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ – ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ವಚ್ಚತೆ ಪರಿಶೀಲನೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸ ದಾಗಿ ಆಯುಕ್ತರಾಗಿ ಬಂದಿರುವ ಡಾ ರುದ್ರೇಶ ಘಾಳಿಯವರು ಸಿಟಿ ರೌಂಡ್ಸ್ ಆರಂಭ ಮಾಡಿದ್ದಾರೆ.ಮೈ ನಡಗುವ ಚಳಿಯ ನಡುವೆ ಬೆಳ್ಳಂ ಬೆಳಿಗ್ಗೆ ಹುಬ್ಬಳ್ಳಿಯ ಹಲವೆಡೆ ಆಯುಕ್ತರು ಸುತ್ತಾಡಿ ಪೌರ ಕಾರ್ಮಿಕರ ಸ್ವಚ್ಚತಾ ಕಾರ್ಯ ಕಸ ಸಂಗ್ರಹಣೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು.

ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ಅವರೊಂದಿಗೆ ನಗರದ ಹಳೇ ಹುಬ್ಬಳ್ಳಿ ವ್ಯಾಪ್ತಿಯ ವಲಯ 10 ಹಾಗೂ 11ರ ವ್ಯಾಪ್ತಿಯಲ್ಲಿ ಬರುವ ಹಳೇ ಹುಬ್ಬಳ್ಳಿ ಮಾರುಕಟ್ಟೆ, ಅಕ್ಕಸಾಲಿಗರ ಓಣಿ, ಪಠಾಣಗಲ್ಲಿ, ಕಟಕರ ಓಣಿ,ಕರ್ಜಗಿ ಓಣಿ,ಮುಂತಾದ ಕಾಲೋನಿಗಳಲ್ಲಿ ಸುತ್ತಾಡಿ ಸ್ವಚ್ಚತಾ ಕಾರ್ಯ ಪರಿಶೀಲನೆ ಮಾಡಿ ಸಾರ್ವಜನಿಕರೊಂದಿಗೆ ಸಮಸ್ಯೆ ಆಲಿಸಿದರು.

ಇದರೊಂದಿಗೆ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಆಟೋ ಟಿಪ್ಪರ್ ಗಳಿಗೆ ಹಾಕುವ ಸಮಯದಲ್ಲಿ ಸರಿಯಾಗಿ ಬೇರ್ಪಡಿಸಿ ನೀಡುತ್ತಿದ್ದಾರೊ ಇಲ್ಲವೊ ಎಂಬೊದನ್ನು ಖುದ್ದಾಗಿ ಪರಿಶೀಲನೆ ಮಾಡಿದರು ಇದರೊಂದಿಗೆ ಹಲವಾರು ವಿಷಯಗಳ ಬಗ್ಗೆ ಪರಿಶೀಲಿಸಿ ಇಂದಿರಾ ನಗರದಲ್ಲಿರುವ ಕಾಂಪ್ಯಾಕ್ಟರ್ ಸ್ಟೇಶನ್ ಹಾಗೂ ಇಂದಿರಾ ಕ್ಯಾಂಟಿನ್ ಕಾರ್ಯವೈಖರಿಯನ್ನು ವೀಕ್ಷಿಸಿ ಸ್ವಚ್ಛತೆ ಹಾಗೂ ಹಸಿರಿಕರಣ ಮಾಡಲು ತಿಳಿಸಲಾಯಿತು.

ಇದರೊಂದಿಗೆ ಪಾಲಿಕೆಯ ಆಯುಕ್ತರು ಸುತ್ತಾಟವನ್ನು ಆರಂಭ ಮಾಡಿದ್ದಾರೆ.ಇನ್ನೂ ಈ ಒಂದು ಈ ಸಂದರ್ಭ ದಲ್ಲಿ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ಸದಸ್ಯರು,ಪಾಲಿಕೆಯ ಉಪ ಆಯುಕ್ತರು ಹಾಗೂ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.