ಜಾತಿ ಸಮೀಕ್ಷೆಗೆ ಬಲಿಯಾದ ಶಿಕ್ಷಕ – ಹೃದಯಾಘಾತದಿಂದ ಶಿಕ್ಷಕ ಸಾವು…..

Suddi Sante Desk
ಜಾತಿ ಸಮೀಕ್ಷೆಗೆ ಬಲಿಯಾದ ಶಿಕ್ಷಕ – ಹೃದಯಾಘಾತದಿಂದ ಶಿಕ್ಷಕ ಸಾವು…..

ಕಲಬುರಗಿ

ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯ ನಡೆಸುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಂಚೋಳಿ ತಾಲೂಕಿನ ಚತ್ರಸಾಲ ಗ್ರಾಮದಲ್ಲಿ  ನಡೆದಿದೆ.ಶಿಕ್ಷಕ ನಾಗಶೆಟ್ಟಿ ಅಮೃತಪ್ಪ ಬಾಸಪಳ್ಳಿ(50) ಮೃತಪಟ್ಟ ಶಿಕ್ಷಕರಾದವರಾಗಿದ್ದಾರೆ.

ಸಮೀಕ್ಷೆಗಾಗಿ ಚತ್ರಸಾಲ ಗ್ರಾಮದಲ್ಲಿ ಮನೆಗಳಿಗೆ ಭೇಟಿ ನೀಡಿದ ವೇಳೆ ಬೆಳಗ್ಗೆ ಘಟನೆ ನಡೆದಿದೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ನಾಗಶೆಟ್ಟಿ ಅವರು ಬುರಗಪಳ್ಳಿ ಗ್ರಾಮದವರಾಗಿದ್ದು 1998 ರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ  ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದು ಸಾವಿಗೆ ತಾಲ್ಲೂಕಿನ ಜಿಲ್ಲೆಯ ಶಿಕ್ಷಕ ಬಂಧುಗಳು ಸೇರಿದಂತೆ ಇಲಾಖೆಯ ಅಧಿಕಾರಿ ಗಳು ಸಿಬ್ಬಂದಿ ಗಳು ಕಂಬನಿ ಮಿಡಿದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.