ಧಾರವಾಡದಲ್ಲೂ ಲೋಕಾಯುಕ್ತ ದಾಳಿ – PWD ಅಧಿಕಾರಿ ಮನೆ ಕಚೇರಿ ಮೇಲೆ ದಾಳಿ ಮಹತ್ವದ ದಾಖಲೆಗಳು ವಶ…..

Suddi Sante Desk
ಧಾರವಾಡದಲ್ಲೂ ಲೋಕಾಯುಕ್ತ ದಾಳಿ – PWD ಅಧಿಕಾರಿ ಮನೆ ಕಚೇರಿ ಮೇಲೆ ದಾಳಿ ಮಹತ್ವದ ದಾಖಲೆಗಳು ವಶ…..

ಧಾರವಾಡ

ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ಟೀಮ್ ದಾಳಿ ಮಾಡಿದ್ದು  ಇತ್ತ ಧಾರವಾಡ ದಲ್ಲೂ ದಾಳಿಯಾಗಿದೆ ಹೌದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಇತ್ತ ಧಾರವಾಡ ದ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನೀಯರ್ ಎಚ್. ಸುರೇಶ ಮನೆ ಹಾಗೂ ಸರಕಾರಿ ಕ್ವಾರ್ಟರ್ಸ್ ಮೇಲೆ ದಾಳಿಯಾಗಿದೆ.

ಧಾರವಾಡದ ಡಿಸಿ ಕಾಂಪೌಂಡ್‌ನಲ್ಲಿರೋ ಕಚೇರಿ, ಕೆಸಿಡಿ ವೃತ್ತದ ಬಳಿಯ ಮನೆ ಮೇಲೆ ದಾಳಿ ಮಾಡ ಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆ ಸೇರಿ ಹಲವು ಕಡೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು ಅಧಿಕಾರಿಗಳು ಹುಡುಕಾಡುತ್ತಿದ್ದಾರೆ.

ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.