ಹೊಸ ಆಯುಕ್ತರ ನೇಮಕಾತಿ ಆದೇಶವನ್ನು ರದ್ದು ಮಾಡಿದ ರಾಜ್ಯ ಸರ್ಕಾರ – ಅಧಿಕಾರ ತಗೆದುಕೊಳ್ಳುವ ಮುನ್ನವೇ ಹೊಸ ಆಯುಕ್ತರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಂದೇನು…..

Suddi Sante Desk
ಹೊಸ ಆಯುಕ್ತರ ನೇಮಕಾತಿ ಆದೇಶವನ್ನು ರದ್ದು ಮಾಡಿದ ರಾಜ್ಯ ಸರ್ಕಾರ – ಅಧಿಕಾರ ತಗೆದುಕೊಳ್ಳುವ ಮುನ್ನವೇ ಹೊಸ ಆಯುಕ್ತರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಂದೇನು…..

ಹುಬ್ಬಳ್ಳಿ

ಹೊಸ ಆಯುಕ್ತರ ನೇಮಕಾತಿ ಆದೇಶವನ್ನು ರದ್ದು ಮಾಡಿದ ರಾಜ್ಯ ಸರ್ಕಾರ – ಅಧಿಕಾರ ತಗೆದುಕೊಳ್ಳುವ ಮುನ್ನವೇ ಹೊಸ ಆಯುಕ್ತರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಂದೇನು…..

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಡಾ ರುದ್ರೇಶ ಘಾಳಿ ಯವರನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಇತ್ತ ಅವರ ಸ್ಥಳಕ್ಕೇ ಹೊಸ ಆಯುಕ್ತರನ್ನಾಗಿ ಮಂಜುನಾಥ ಡೊಂಬರ ಅವರನ್ನು ನೇಮಕ ಮಾಡಿ ಆದೇಶವನ್ನು ಮಾಡ ಲಾಗಿತ್ತು.

ನಿನ್ನೆ ಸಂಜೆ ನೇಮಕಾತಿ ಆದೇಶವನ್ನು ರಾಜ್ಯ ಸರ್ಕಾರದ ಪರವಾಗಿ ಅಧೀನ ಕಾರ್ಯದರ್ಶಿ ಯವರು ಮಾಡಿದ್ದರು ಈ ಒಂದು ಆದೇಶದ ನಂತರ ಬೆಂಗಳೂರಿನಿಂದ ಅಧಿಕಾರವನ್ನು ವಹಿಸಿಕೊಳ್ಳಲು ಹುಬ್ಬಳ್ಳಿಗೆ ಬರುತ್ತಿರು ವಾಗಲೇ ಇನ್ನೇನು ಚಾರ್ಜ್ ತಗೆದುಕೊಳ್ಳಬೇಕಾದ ಮಂಜುನಾಥ ಡೊಂಬರ ಅವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ ನಿನ್ನೆ ಮಾಡಿದ ಆದೇಶವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಯವರು ರದ್ದು ಮಾಡಿದ್ದಾರೆ.

ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿ ಸಿದೆ ಎಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶಪ್ರಸಾದ್ ಅವರು ಉಲ್ಲೇಖ ಮಾಡಿ ಆದೇಶ ಮಾಡಿದ್ದಾರೆ.ಇದರಿಂದಾಗಿ ಹುಬ್ಬಳ್ಳಿ ಧಾರಾವಾಡ ಮಹಾನಗರ ಪಾಲಿಕೆಯ ಆಯುಕ್ತರು ಯಾರು ಎಂಬೊದು ಡೋಲಾಯಮಾನವಾಗಿದ್ದು ಏನೇನಾ ಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.

ಇನ್ನೂ ಸಧ್ಯ ಇರುವ ಡಾ ರುದ್ರೇ ಘಾಳಿಯವರೇ ಮುಂದುವರೆಯುತ್ತಾರೆ ಅವರೇ ಇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಏನೇನಾಗಲಿದೆ ಎಂಬೊದಕ್ಕೆ ಸಂಜೆಯೊಳಗಾಗಿ ಉತ್ತರ ಸಿಗಲಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.