BEO ಗೆ ನೋಟಿಸ್ ಮುಖ್ಯಶಿಕ್ಷಕ ಅಮಾ‌ನತು – ವರದಿ ಪರಿಶೀಲಿಸಿ ಕ್ರಮಕೈಗೊಂಡ ಇಲಾಖೆ…..

Suddi Sante Desk
BEO ಗೆ ನೋಟಿಸ್ ಮುಖ್ಯಶಿಕ್ಷಕ ಅಮಾ‌ನತು – ವರದಿ ಪರಿಶೀಲಿಸಿ ಕ್ರಮಕೈಗೊಂಡ ಇಲಾಖೆ…..

ಬಾಗಲಕೋಟೆ

ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ನೀಡಿದ್ದ ಹಾಲಿನ ಪುಡಿ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಪಿ.ಎಂ. ಪೋಷಣ್‌ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಇನ್ನೂ ಮುಖ್ಯ ಶಿಕ್ಷಕರೊಬ್ಬರನ್ನು ಅಮಾನುತುಗೊಳಿಸಲಾಗಿದೆ ಹೌದು ಬಾದಾಮಿ ತಾಲ್ಲೂಕಿನ ಸೂಳಿಕೇರಿಯ ಗೋದಾಮಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದ

44.7 ಕ್ವಿಂಟಲ್‌ ಹಾಲಿನ ಪುಡಿ ಪ್ರಕರಣದ ಆರೋಪಿ ಯಾವ, ಯಾವ ಶಾಲೆಗಳಿಂದ ಹಾಲಿನ ಪುಡಿ ಖರೀದಿ ಸುತ್ತಿದ್ದೆ ಎಂದು ನೀಡಿದ ಹೇಳಿಕೆ ಆಧರಿಸಿ ಪರಿಶೀಲನೆಗೆ ತಂಡ ರಚಿಸಲಾಗಿತ್ತು ಆ ವರದಿ ಆಧರಿಸಿ ಕ್ರಮಕೈಗೊಳ್ಳ ಲಾಗಿದೆ

81 ಶಾಲೆಗಳಲ್ಲಿ ಹಾಲಿನ ನ್ಯೂನತೆ ಎಸಗಿರುವುದು ಕಂಡು ಬಂದಿದೆ. 56 ಶಾಲೆಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅನುದಾನಿತ ಪ್ರಾಥಮಿಕ, ಪ್ರೌಢ. ಶಾಲೆಗಳ 15 ಮಂದಿ ಮುಖ್ಯ ಶಿಕ್ಷಕ ವಿರುದ್ಧ ಕ್ರಮ ಜರುಗಿಸುವಂತೆ ಆಡಳಿತ ಮಂಡಳಿಗಳಿಗೆ ಪತ್ರ ಬರೆಯ ಲಾಗಿದೆ.

ನೋಟಿಸ್ ನೀಡಿದ್ದ ಶಾಲೆಗಳ ಪೈಕಿ ಸರ್ಕಾರಿಯ 6 ಶಾಲೆಗಳವರು ಮೂರು ಅನುದಾನಿತ ಶಾಲೆಗಳವರು ಉತ್ತರ ಅಥವಾ ದಾಖಲೆಯನ್ನು ನೀಡಿಲ್ಲ ಅವರಿಗೆ ಕಾರಣ ಕೇಳಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ

ಘಟನೆ ನಡೆದಾಗ ಪಿ.ಎಂ. ಪೋಷಣ್‌ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿಯಾಗಿದ್ದ ಕೇಶವ ಪೆಟ್ಲೂರ್ ಅವರಿಗೆ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದ ಕಾರಣಕ್ಕೆ ವಿವರ ಕೇಳಿ ನೊಟೀಸ್ ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.