ಶಿಕ್ಷಕರಿಗೆ ಮತ್ತೊಂದು ತಲೆನೋವು – ದಸರಾ ಹೋಯಿತು ಈಗ ದೀಪಾವಳಿಗೂ ಖೋತಾ…..ಅಯ್ಯೋ ದೇವರೆ…..

Suddi Sante Desk
ಶಿಕ್ಷಕರಿಗೆ ಮತ್ತೊಂದು ತಲೆನೋವು – ದಸರಾ ಹೋಯಿತು ಈಗ ದೀಪಾವಳಿಗೂ ಖೋತಾ…..ಅಯ್ಯೋ ದೇವರೆ…..

ಉಡುಪಿ –

 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅ.18 ರೊಳಗೆ ಪೂರ್ಣಗೊಳಿಸಲು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಇದೀಗ ಶಿಕ್ಷಕರಿಗೆ ಸಮೀಕ್ಷೆಯ ಸಂದರ್ಭದಲ್ಲಿ ಹೇಳದ ಹೊಸ ಕೆಲಸಗಳನ್ನು ವಹಿಸುತ್ತಿರುವುದು ಈ ಬಾರಿ ದೀಪಾವಳಿ ಖೋತಾ ಆಗಲಿದೆಯೇ ಆತಂಕ ಎದುರಾಗಿದೆ.

ಅ.18 ಶನಿವಾರ, ಅ.19, ರವಿವಾರ, ಅ.20 ರಿಂದ ದೀಪಾವಳಿ ಸಡಗರ ರಂಗೇರುತ್ತದೆ. ಬಹುತೇಕ ಶಾಲಾ ಕಾಲೇಜು, ವಿವಿಧ ಸಂಸ್ಥೆಗಳು ರಜೆ ಇರುತ್ತದೆ. ಈ ಅವಧಿಯಲ್ಲಿ ಎಲ್ಲರೂ ಹಬ್ಬದ ಗುಂಗಿನಲ್ಲಿರುತ್ತಾರೆ. ಶಿಕ್ಷಕರು ಮಾತ್ರ ಸಮೀಕ್ಷೆಯಲ್ಲಿರಬೇಕಾದ ಅನಿವಾ ರ್ಯತೆಯ ಆತಂಕ ಎದುರಾಗಿದ್ದು ಈ ಹಿಂದೆ ದಸರಾ ಹಬ್ಬ ವನ್ನು ಆಚರಣೆ ಮಾಡದ ಶಿಕ್ಷಕರಿಗೆ ಸಧ್ಯ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದ್ದು ಆತಂಕ ದಲ್ಲಿದ್ದಾರೆ.

ಇತ್ತ ಶಿಕ್ಷಕರ ಧ್ವನಿ ಯಾಗಿ ಈ ಒಂದು ವಿಚಾರ ವನ್ನು ಪ್ರಶ್ನೆ ಮಾಡಬೇಕಾದ ಶಿಕ್ಷಕ ಸಂಘಟನೆಯ ನಾಯಕರು ಮೌನವಾಗಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.