ಧಾರವಾಡ –
ಧಾರವಾಡ ಮಹಾನಗರ ಪಾಲಿಕೆಯಲ್ಲಿ ಉಪಮೇಯರ್ ಸಂತೋಷ ಚವ್ಹಾಣ ಅವರಿಂದ ಧ್ವಜಾರೋಹಣ – ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ …..ಉಪಮೇಯರ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು…..
ಗಣರಾಜ್ಯೋತ್ಸವವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾ ಯಿತು ಹೌದು ಧಾರವಾಡದ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮ ದಿಂದ ಆಚರಿಸಲಾಯಿತು.ದೇಶಭಕ್ತಿಯ ಉತ್ಸಾಹದೊಂದಿಗೆ ಪಾಲಿಕೆಯಲ್ಲಿ ಆಚರಿಸಲಾಯಿತು.ಉಪಮಹಾಪೌರರಾದ ಸಂತೋಷ ಚವ್ಹಾಣ ಅವರು ಧ್ವಜಾರೋಹಣವನ್ನು ಮಾಡಿದರು.

ಇದೇ ವೇಳೆ ಮಾತನಾಡಿದ ಅವರು ಭಾರತೀಯ ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಭಾರತದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಕಾರ್ಯನಿರ್ವಹಿಸಿದರು ಸಂವಿಧಾನದ ಕರಡನ್ನು ಸಿದ್ಧಪಡಿಸಲು ರಚಿಸಲಾದ ಕರಡು ರಚನಾ ಸಮಿತಿಯ ಮುಖ್ಯಸ್ಥರಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೇಮಕಗೊಂಡಿದ್ದರು
ಅಂಬೇಡ್ಕರ್ ಅವರು ಲಂಡನ್ ದೇಶದ ಗ್ರಂಥಾಲಯಗಳಲ್ಲಿ ದೀರ್ಘಕಾಲ ಕುಳಿತು ಸುಮಾರು 100 ದೇಶಗಳ ಸಂವಿಧಾನಗ ಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದರು. ಇವರ ಈ ಅಗಾಧವಾದ ಜ್ಞಾನ ಮತ್ತು ಶ್ರಮವನ್ನು ಗುರುತಿಸಿ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಸಂವಿಧಾನವನ್ನು ಪ್ರತಿಯೊಂದು ಪದ ಪ್ರತಿಯೊಂದು ಸಾಲು ಪ್ರತಿಯೊಂದು ಪ್ಯಾರಾ ಮತ್ತು ಪುಟದಿಂದ ಪುಟಕ್ಕೆ ಅತ್ಯಂತ ನಿಖರವಾಗಿ ಬರೆದರು Nation Frist Everything Is Next ಅಂತ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಶ ಬೆದರೆ, ಪಾಲಿಕೆಯ ಸದಸ್ಯರಾದ ಶಂಭುಗೌಡ ಸಾಲಿಮನಿ, ಮಂಜುನಾಥ ಪಟ್ಟಣನವರ, ಆನಂದ ಯಾವಗಲ್, ಶ್ರೀಮತಿ ಕವಿತಾ ಕಬ್ಬೇರ ಹಾಗೂ ಶ್ರೀಮತಿ ಲಕ್ಷ್ಮೀ ಹಿಂಡಸಗೇರಿ ಅವರು ಉಪಸ್ಥಿತರಿದ್ದರು.
ಆಡಳಿತಾತ್ಮಕವಾಗಿ, ಪಾಲಿಕೆಯ ನೂತನ ಉಪ ಆಯುಕ್ತರಾದ (ಆಡಳಿತ) ಶ್ರೀಮತಿ ಅನುರಾಧ ವಸ್ತ್ರದ, ಸಹಾಯಕ ಆಯುಕ್ತ ರಾದ ಅರವಿಂದ ಜಮಖಂಡಿ, ಶಂಕರ ಪಾಟೀಲ,ರಮೇಶ ನೂಲ್ವಿ, ಸಚಿನ ಕಾಂಬ್ಳೆ ಸೇರಿದಂತೆ ಧಾರವಾಡದ ವಿವಿಧ ವಲಯ ಕಚೇರಿಗಳ ಸಿಬ್ಬಂದಿಗಳು, ಆರೋಗ್ಯ ನಿರೀಕ್ಷಕರು, ಹಾಗೂ ಪೌರ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡು ರಾಷ್ಟ್ರದ ಈ ಪವಿತ್ರ ಹಬ್ಬವನ್ನು ಸಂಭ್ರಮಿಸಿದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..



