This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಾಲಾ ಆರಂಭದ ಮೊದಲ ದಿನವೇ ಶಾಲೆಯಲ್ಲಿ ಗಲಾಟೆ ಶಾಲೆಯಲ್ಲಿ ಪ್ರವೇಶ ನೀಡದ ಮುಖ್ಯಶಿಕ್ಷಕ ವಿರುದ್ಧ ಆಕ್ರೋಶ…..

WhatsApp Group Join Now
Telegram Group Join Now

ಶಿವಮೊಗ್ಗ –

ಪ್ರವೇಶ ನೀಡಲು ನಿರಾಕರಿಸಿದೆ ಎಂದು ಆರೋಪಿಸಿ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.ಹೌದು ಗಾಡಿಕೊಪ್ಪದಲ್ಲಿ‌ ರುವ ಸೇಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಎಲ್ಕೆ ಜಿ,ಯುಕೆಜಿ ಓದಿದ ಯೋಗೀಶ್ ಹಾಗೂ ಅರ್ಪಿತ ಅವರ ಪುತ್ರಿಗೆ ಒಂದನೇ ತರಗತಿಗೆ ಪ್ರವೇಶ ನೀಡಲು ಶಾಲೆ ನಿರಾಕ ರಿಸಿದೆ ಎಂಬ ಆರೋಪ ಕೇಳಿಬಂದಿದೆ.ಈ ವಿಚಾರವಾಗಿ ಪೋಷಕರು ಶಾಲೆಯ ಪ್ರಿನ್ಸಿಪಾಲ್ರನ್ನು ಭೇಟಿ ಮಾಡಿ ತಮ್ಮ ಮಗಳಿಗೆ ಒಂದನೇ ತರಗತಿಗೆ ಪ್ರವೇಶ ನೀಡುವಂತೆ ವಿನಂತಿಸಿಕೊಂಡಿದ್ದಾರೆ.ಆದರೆ ಪ್ರಿನ್ಸಿಪಾಲರು ಪ್ರವೇಶ ನೀಡಲು ನಿರಾಕರಿಸಿದ್ದಾರಂತೆ.ನಂತರ ಶಾಲೆಯ ಫಾದರ್ ಸಜನ್ ಆಗಮಿಸಿ ಅರ್ಪಿತ ಅವರಿಗೆ ಏಕವಚನದಲ್ಲಿ ಬೈಯ್ದು ಕಳುಹಿಸಿದ್ದಾರಂತೆ.ಇದರಿಂದ ನೊಂದ ಪೋಷ ಕರು ತಮ್ಮ ಮಗಳಿಗೆ ಇದೇ ಶಾಲೆಯಲ್ಲಿ ಸೀಟು ನೀಡಿ ಎಂದು ಒತ್ತಾಯಿಸಿದ್ದಾರೆ.ವಿದ್ಯಾರ್ಥಿನಿಗೆ ಪ್ರವೇಶ ನೀಡಲು ನಿರಾಕರಿಸಿದ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವನ್ನು ವ್ಯಕ್ತಪಡಿಸಿದ್ದಾರೆ

ಅರ್ಪಿತ ಹಾಗೂ ಯೋಗೀಶ್ ಅವರ ದೊಡ್ಡ ಮಗಳು ಇದೇ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆದರೂ ಸಹ ತಮ್ಮ ಮಗಳಿಗೆ ಇಲ್ಲಿ ಸೀಟು ನೀಡದೆ ಇರುವುದಕ್ಕೆ ಅವರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ಶಾಲೆಯವರು ನಿಮ್ಮ ಮಗಳಿಗೆ ಒಂದನೇ ತರಗತಿಗೆ ಪ್ರವೇಶ ನೀಡಲಾಗುವುದು ಎಂದು ಪೋನ್ ಮಾಡಿ ತಿಳಿಸಿದ್ದಾರಂತೆ.ನಂತರ ಬೆಟರ್ ಮೆಂಟ್ ಚಾರ್ಜ್ ಕಟ್ಟಬೇಕು ಎಂದು ಹೇಳಿದ್ದಾರೆ.ಅದಕ್ಕೆ ಒಪ್ಪಿದ್ರು ಸಹ ನಿಮ್ಮ ಮಗಳಿಗೆ ಪ್ರವೇಶ ನೀಡಲ್ಲ ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ ಎಂದು ವಿದ್ಯಾರ್ಥಿನಿಯ ತಾಯಿ ಅರ್ಪಿತ ಆರೋಪಿಸಿ ದ್ದಾರೆ.ಪ್ರವೇಶ ನಿರಾಕರಿಸಿದ್ದಕ್ಕೆ ಹಿಂದೂಪರ ಸಂಘಟನೆ ಗಳು ಶಾಲೆಯ ಬಳಿ ಹೋಗಿ ಪೋಷಕರ ಪರವಾಗಿ ವಾದ ಮಾಡಿದರು. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಅದೇ ಶಾಲೆಯಲ್ಲಿ ಪ್ರವೇಶ ನೀಡಲು ನಿರಾಕರಿಸಿದ್ದಕ್ಕೆ ಹಾಗೂ ಪೋಷಕರಿಗೆ ಗೌರವ ನೀಡಿಲ್ಲವೆಂದು ಆಕ್ರೋಶ ಹೊರಹಾಕಿದರು.ನಂತರ ಪೋಷಕರಿಗೆ ಗದರಿಸಿದ ಫಾದರ್ ರನ್ನು ಕರೆಯಿಸಿ ಪೋಷಕರ‌ ನಡುವೆ ಸಭೆ ನಡೆಸಿ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು ನಂತರ ಫಾದರ್ ಸಜನ್ ಅವರು ಅರ್ಪಿತ ಹಾಗೂ ಯೋಗೀಶ್ ಅವರ ಪುತ್ರಿಗೆ ಒಂದನೇ ತರಗತಿಗೆ ಪ್ರವೇಶ ನೀಡುವುದಾಗಿ ತಿಳಿಸಿದರು.


Google News

 

 

WhatsApp Group Join Now
Telegram Group Join Now
Suddi Sante Desk