ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ಹೋಗಿದ್ದರು – ಇಂದು ಅದೇ ಆಟೋ ಚಾಲಕನಿಂದಲೇ ಗಾಯಗೊಂಡು ಆಸ್ಪತ್ರೆ ಸೇರಿದ್ರು – ಹುಬ್ಬಳ್ಳಿಯಲ್ಲಿನ ಪಾಗಲ್ ಪ್ರೇಮಿಯ ಲವ್ ಕಹಾನಿ
ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಯುವತಿಯ ಮೇಲೆ ಪಾಗಲ್ ಪ್ರೇಮಿಯ ತಲ್ವಾರ್ ಅಟ್ಯಾಕ್ ಹಿಂದೆ ಒಂದು ದೊಡ್ಡ ಲವ್ ಸ್ಟೋರಿ ಇದೆ. ಹೌದು ಯುವತಿಯ ಹೆಸರು ಶೈನಾ ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿ. ನಗರದ ಜ್ಯೂವೇಲರಿ ಮಳಿಗೆಯೊಂದರಲ್ಲಿ ಕೆಲಸ ಮಾಡ್ತಾ ಇದ್ದಾರೆ. ದೇಶಪಾಂಡೆ ನಗರದಿಂದ ಶಾಫ್ ಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಳೆದ ಒಂದೂವರೆ ವರುಷದ ಹಿಂದೆ ಬಿದ್ದು ಗಾಯಮಾಡಿಕೊಂಡಿದ್ದರು. ತೀವ್ರಾವಾಗಿ ಗಾಯವನ್ನು ಮಾಡಿಕೊಂಡಿದ್ದ ಶೈನಾ ನನ್ನು ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗೆ ಕೈ ಮಾಡಿ ಅದರಲ್ಲಿ ಹತ್ತಿಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ಮತ್ತೊಮ್ಮೆ ಆಟೋದಲ್ಲಿ ಶೈನಾ ಅವರನ್ನು ಮಳಿಗೆಗೆ ಬಿಟ್ಟು ನಂತರ ಅವರ ಪೊನ್ ನಂಬರ್ ತಗೆದುಕೊಂಡು ಪರಿಚಯವನ್ನು ಮಾಡಿಕೊಳ್ಳುತ್ತಾನೆ.

ಗ್ರಾಹಕರಂತೆ ಆಟೋದಲ್ಲಿ ಪರಿಚಯವಾದ ಇಮ್ತಿಯಾಜ್ ದಿನ ಕಳೆದಂತೆ ಸ್ನೇಹ ಪ್ರೀತಿಯಾಗುತ್ತದೆ. ನಂತರ ಮಹಾಮಾರಿ ಕರೋನಾ ಗೆ ಲಾಕ್ ಡೌನ್ ಸಮಯದಲ್ಲಿ ಅಲ್ಲಲ್ಲಿ ಸುತ್ತಾಡಿ ಕೆಲವೊಂದಿಷ್ಟು ಸೆಲ್ಪಿ ಪೊಟೊಗಳನ್ನು ಕ್ಲೀಕ್ ಮಾಡಿಕೊಳ್ಳುತ್ತಾರೆ.

ದಿನ ಕಳೆದಂತೆ ಇಮ್ತಿಯಾಜ್ ಶೈನಾ ಅವರನ್ನು ಹೆಚ್ಚು ಪ್ರೀತಿ ಮಾಡಲು ಮುಂದಾಗುತ್ತಾನೆ. ಆದ್ರೂ ಇದಕ್ಕೇ ಅವಕಾಶ ಕೊಡದ ಶೈನಾ ಸ್ವಲ್ಪು ದೂರು ಉಳಿಯಲು ಮುಂದಾಗುತ್ತಾರೆ. ಲಾಕ್ ಡೌನ್ ಮುಗಿಯಿತು ಇತ್ತ ಮತ್ತೇ ಕೆಲಸ ಆರಂಭವಾಯಿತು. ಇಮ್ತಿಯಾಜ್ ನನ್ನು ತುಂಬಾ ಅವೈಡ್ ಮಾಡಲು ಮುಂದಾಗುತ್ತಾರೆ ಶೈನಾ ಪೊನ್ ಮಾಡಿದ್ರು ರಿಸೀವ್ ಮಾಡೊದಿಲ್ಲ ಮೆಸೇಜ್ ಮಾಡಿದ್ರು ರಿಪೈ ಮಾಡೊದಿಲ್ಲ ಇದರಿಂದ ಅಸಮಾಧನಗೊಂಡ ಇಮ್ತಿಯಾಜ್ ಬೇಸತ್ತು ಇಂದು ಹೇಗಾದರೂ ಮಾಡಿ ಮುಗಿಸಬೇಕು ಎಂದುಕೊಂಡು ಸ್ಕೇಚ್ ರೇಡಿ ಮಾಡ್ತಾನೆ.

ಎಂದಿನಂತೆ ಇಂದು ಬೆಳಿಗ್ಗೆ ಕೆಲಸಕ್ಕೇ ದೇಶಪಾಂಡೆ ನಗರದಲ್ಲಿರುವ ಮನೆಯಿಂದ ಕೆಲಸಕ್ಕೇ ಶೈನಾ ಹೊರಟಿರುವಾಗ ಮನೆಯ ಮುಂದೆ ಕಾಯುತ್ತಾ ಕುಳಿತುಕೊಂಡಿದ್ದ ಇಮ್ತಿಯಾಜ್ ತಲ್ವಾರ್ ನಿಂದ ಏಕಾಎಕಿಯಾಗಿ ದಾಳಿ ಮಾಡುತ್ತಾನೆ. ನಡು ರಸ್ತೆಯಲ್ಲಿಯೇ ತಲ್ವಾರ್ ನಿಂದ ಏಳೆನೀರು ಕಡಿದಂತೆ ಯುವತಿಯನ್ನು ನೆಲಕ್ಕೇ ಹಾಕಿ ಕುತ್ತಿಗೆ ಭಾಗಕ್ಕೇ ಹಾಕುತ್ತಾನೆ. ಸಧ್ಯ ಯುವತಿಯನ್ನು ಸ್ಥಳದಲ್ಲಿದ್ದ ಮಂಜುನಾಥ ಎಂಬುವರೇ ರಕ್ಷಣೆ ಮಾಡಿದ್ದಾರೆ.

ಇನ್ನೂ ಇಮ್ತಿಯಾಜ್ ವೃತ್ತಿಯಲ್ಲಿ ಆಟೋ ಚಾಲಕ. ಕುಂದಗೋಳ ತಾಲೂಕಿನ ಕುಂಕುರ ಗ್ರಾಮದವನು. ನಗರದಲ್ಲಿ ಆಟೋ ಓಡಿಸುತ್ತಿದ್ದಾನೆ. ಒಟ್ಟಾರೆ ಕಾಲಿಗೆ ಗಾಯಮಾಡಿಕೊಂಡು ಆಟೋದಲ್ಲಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿದ್ದ ಶೈನಾ ಈಗ ಮತ್ತೇ ಅದೇ ಆಟೋ ಚಾಲಕನಿಂದಲೇ ಮಾರಣಾಂತಿಕ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸಧ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇತ್ತ ಆರೋಪಿ ಇಮ್ತಿಯಾಜ್ ಪೊಲೀಸರ ಅತಿಥಿಯಾಗಿದ್ದಾರೆ.