This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಅವಳಿ ನಗರದ ತುಂಬೆಲ್ಲಾ ಮಾಜಿ ಪ್ರಧಾನಿ ಜನ್ಮ ದಿನ ಆಚರಣೆ – ವಿವಿಧ ಕಾರ್ಯಕ್ರಗಳ ಮೂಲಕ ಅಟಲ್ ಜೀ ಹುಟ್ಟು ಹಬ್ಬ ಆಚರಣೆ

WhatsApp Group Join Now
Telegram Group Join Now

ಹುಬ್ಬಳ್ಳಿ – ಧಾರವಾಡ

ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅವರ ಹುಟ್ಟು ಹಬ್ಬವನ್ನು ಹುಬ್ಬಳ್ಳಿ ಧಾರವಾಡದಲ್ಲೂ ಆಚರಣೆ ಮಾಡಲಾಯಿತು.

ಭಾರತೀಯ ಜನತಾ ಪಕ್ಷದಿಂದ ಅವಳಿ ನಗರದಲ್ಲಿ ಮಾಜಿ ಪ್ರಧಾನಿಯವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು. ಧಾರವಾಡದಲ್ಲಿ ಧಾರವಾಡ 71 ನಗರ ಘಟಕದ ಯುವ ಮೋರ್ಚಾ ವತಿಯಿಂದ,ಮಾಜಿ ಪ್ರಧಾನ ಮಂತ್ರಿಗಳಾದ ಭಾರತ ರತ್ನ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿಯ ಅಂಗವಾಗಿ “ಗೋ ಶಾಲೆಯ ಸ್ವಚ್ಛತಾ ಕಾರ್ಯಕ್ರಮ ಹಾಗೂ ಗೋ ಪೂಜಾ ಕಾರ್ಯಕ್ರಮವನ್ನು ಮಾಡುವ ಮೂಲಕ ಆಚರಣೆ ಮಾಡಲಾಯಿತು.

ನಿತಿನ್ ಇಂಡಿ ಅವರ ಗೋಶಾಲೆಯಲ್ಲಿ ಯುವಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ಸೀಮಾ ಮಸೂತಿ, ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಅಧ್ಯಕ್ಷರಾದ ಈರೇಶ ಅಂಚಟಗೇರಿ,

ಮಂಡಳ ಅಧ್ಯಕ್ಷರಾದ, ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂದಳಿ, ಮುತ್ತು ಬನ್ನೂರ, ಪ್ರಮುಖರಾದ ನಿತಿನ ಇಂಡಿ, ಸಿದ್ದು ಕಲ್ಯಾನಶೆಟ್ಟಿ, ಮಂಜುನಾಥ ಯರಗಟ್ಟಿ, ಮಂಜುನಾಥ ಭೋಸಲೆ, ಪ್ರಕಾಶ್ ಇಂಗಳೆ, ನಿಂಗಪ್ಪ ಸಪೂರಿ ಸೇರಿದಂದೆ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇನ್ನೂ ಇತ್ತ ಧಾರವಾಡ ಗ್ರಾಮೀಣ ಪ್ರದೇಶದಲ್ಲೂ ಕೂಡಾ ಆಚರಣೆ ಮಾಡಲಾಯಿತು. ಗೋ ಮಾತೆ ಪೂಜೆ ಮಾಡುವ ಮುಖಾಂತರ ಅಟಲ ಬಿಹಾರಿ ವಾಜಪೇಯಿಜಿ ಅವರ ಹುಟ್ಟುಹಬ್ಬವನ್ನು ಯುವ ಮೋರ್ಚಾ ವತಿಯಿಂದ ಆಚರಣೆ ಮಾಡಲಾಯಿತು.

ಯುವ ಮೋರ್ಚಾದ ಅಧ್ಯಕ್ಷ ಶಂಕರ ಕೋಮಾರದೇಸಾಯಿ ನೇತ್ರತ್ವದಲ್ಲಿ ಆಚರಣೆ ಮಾಡಲಾಯಿತು,ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಬಸವಣ್ಣನರ ದೇವಸ್ಥಾನದ ಹತ್ತಿರ ಗೋ ಮಾತೆಯನ್ನು ಪೂಜೆ ಮಾಡಿ ಹುಟ್ಟು ಹಬ್ಬವನ್ನು ಗ್ರಾಮೀಣ ಬಿಜೆಪಿ ಯುವಕರು ಆಚರಣೆ ಮಾಡಿದರು.

ಈ ಒಂದು ವಿಶೇಷ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಂಕರ ಕೋಮಾರದೇಸಾಯಿ ಅವರೊಂದಿಗೆ ಚಂದ್ರಶೇಖರ ತಲ್ಲೂರ, ಸಿದ್ದನಗೌಡ ಪಾಟೀಲ, ಕಲ್ಲಪ್ಪ ಹಟ್ಟಿ, ಬಸವರಾಡ ಗುಡೆನ್ನವರ, ಮಂಜುನಾಥ ಅಂಗಡಿ, ಬಸವರಾಜ ಗುರಪ್ಪನವರ, ಬಸವರಾಜ ಶೇರೆವಾಡ,ಬಸವರಾಜ ಮುದಕವೇರಿ, ವಿಠ್ಠರ ಯಡಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.


ಇನ್ನೂ ಇತ್ತ ಹುಬ್ಬಳ್ಳಿಯ ಹಲವೆಡೆ ಮಾಜಿ ಪ್ರಧಾನಿಯವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಹು-ಧಾ ಮಹಾನಗರ ಸೆಂಟ್ರಲ್ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಯಿತು

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಾನ್ಯ ಶ್ರೀ ದಿ ಅಟಲ್ ಜೀ ಯವರ ಹುಟ್ಟು ಹಬ್ಬದ ಅಂಗವಾಗಿ ದೇಶದ ರೈತರನ್ನು ಉದ್ದೇಶಿಸಿ ನೇರ ಪ್ರಸಾರದ ಟಿವಿ ಮುಖಾಂತರ ಮಾತನಾಡಿದರು. ಇದರ ನೇರ ಪ್ರಸಾರವನ್ನು ಗೋಪನಕೊಪ್ಪ ದಲ್ಲಿರುವ ಈಶ್ವರಗೌಡ ಬ ಪಾಟೀಲ ಅವರ ಮನೆಯ ಆವರಣದಲ್ಲಿ ನೇರ ಪ್ರಸಾರವನ್ನು ಸಚಿವರುಗಳಾದ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಯವರು ವೀಕ್ಷಣೆ ಮಾಡಿದರು.

ಕ್ಷೇತ್ರದ ರೈತ ಜೊತೆಗೆ ಪ್ರೊಜೆಕ್ಟ್ ರ ಪರದೆಯ ಮುಖಾಂತರ ನೇರ ಪ್ರಸಾರವನ್ನು ವೀಕ್ಷಿಸಿ ಇದೇ ವೇಳೆ ರೈತರ ಜೊತೆಗೆ ನಡೆದ ಸಂವಾದವನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ರೈತರಿಗೆ ಸನ್ಮಾನವನ್ನು ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸಾವುಕಾರ ಸೆಂಟ್ರಲ್ ಕ್ಷೇತ್ರದ ಉಸ್ತುವಾರಿಗಳು ಸಂತೋಷ ಚವ್ಹಾಣ.ಈಶ್ವರಗೌಡ ಬ ಪಾಟೀಲ.ರೈತ ಮೂರ್ಚಾ ಅಧ್ಯಕ್ಷರು.ಎಲ್ಲ ಪದಾಧಿಕಾರಿಗಳು,ಪ್ರಮುಖರು ಮತ್ತು ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk