ನವಲಗುಂದ –
ರೈತ ಬಂಡಾಯದ ನೆಲ ನವಲಗುಂದ ದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಪ್ರಚಾರದ ಕಾವು ಜೋರಾಗಿದೆ.ಈಗಾಗಲೇ ಕ್ಷೇತ್ರದಲ್ಲಿ ಬಿಡುವಿಲ್ಲದೆ ಸುತ್ತಾಡುತ್ತಿರುವ ಇವರಿಗೆ ಉತ್ತಮವಾದ ಸ್ಪಂದನೆ ಸಿಗುತ್ತಿದೆ.
ಇನ್ನೂ ಕ್ಷೇತ್ರದ ಗೊಪ್ಪರಗುಪ್ಪಿ ಗ್ರಾಮಕ್ಕೆ ಪ್ರಚಾರಕ್ಕೆ ಆಗಮಿಸಿದ ಇವರಿಗೆ ಭರ್ಜರಿ ಸ್ವಾಗತ ವನ್ನು ಗ್ರಾಮಸ್ಥರು ಕೋರಿದರು ನವಲಗುಂದ ವಿಧಾನಸಭಾ ಕ್ಷೇತ್ರದ ಗೊಪ್ಪರಗುಪ್ಪಿ ಗ್ರಾಮದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬರಮಾಡಿಕೊಂಡರು.ನಂತರ ಗೊಪ್ಪರಗುಪ್ಪಿ ಗ್ರಾಮದ ಪ್ರತಿ ದೇವಸ್ಥಾ ನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಮತಯಾಚನೆಯನ್ನು ಮಾಡಿದರು.
ಗೊಬ್ಬರಗುಪ್ಪಿ ಗ್ರಾಮದ ಕುರುಬ ಸಮಾಜದವರು ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.ಊರಿನ ತುಂಬಾ ಪ್ರತಿ ಬೀದಿಗಳಲ್ಲಿ ಸಂಚರಿಸಿ ಮತಯಾ ಚನೆಯನ್ನು ಮಾಡಿದರು ಶಂಕರ ಪಾಟೀಲರು.
ಈ ಸಂದರ್ಭದಲ್ಲಿ ಗ್ರಾಮದ ಸಿದ್ದಣ್ಣ ಕೆಟಗೇರಿ, ಸಿದ್ದನಗೈಡ್ರ ಮರಿಗೌಡ್ರ,ಎಮ್.ಬಿ.ಪಾಟೀಲ್, ಶಿವಾನಂದ ಮಠಪತಿ,ಯಲ್ಲಪ್ಪ ಸಾಲಿ , ಶೇಖರ ಗೌಡ ಕುಲಕರ್ಣಿ ಇನ್ನೂ ಅನೇಕ ಕಾರ್ಯಕರ್ತರು ಯುವಕರು ಭಾಗಿಯಾಗಿದ್ದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..