ಕುಂದಗೋಳ –
ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಪರ್ವ ಮುಂದುವರಿದಿದೆ ಹೌದು ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ಅವರ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಭಾಜಪ ಸೇರ್ಪಡೆ ಮುಂದುವರಿದಿದೆ.
ಹೌದು ಕುಂದಗೋಳ ಮತ ಕ್ಷೇತ್ರದ ಅಂಚಟಗೇರಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ರುದ್ರಯ್ಯ ಚಿಕ್ಕವಿರಯ್ಯನಮಠ, ಮುತ್ತು ಕೊರಿ, ಜಗದೀಶ್ ಹಿರೇಮಠ, ಬಸವರಾಜ ಭಯರಂಬಳಿಮಠ, ಬಸವರಾಜ ಸಾದರ, ಗದಿಗೇಪ್ಪ ಮೊರಬದ, ಸೇರಿದಂತೆ 25ಕ್ಕು ಹೆಚ್ಚುಜನ ಭಾಜಪ ಅಭ್ಯರ್ಥಿ ಎಂ ಆರ್ ಪಾಟೀಲ ನೇತೃತ್ವದಲ್ಲಿ ಭಾಜಪ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾದರು
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಮೊರಬದ, ಬಸವರಾಜ ಬಿಡನಾಳ, ಉಮೇಶ್ ಕುಸುಗಲ, ಲಿಂಗರಾಜ ಮೆಣಸಿನಕಾಯಿ. ಬಸವರಾಜ ಹೊಸಕಟ್ಟಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..