ಸೋತ ಅಭ್ಯರ್ಥಿಯ ಮೇಲೆ ಗೆದ್ದ ಅಭ್ಯರ್ಥಿ ಹಲ್ಲೆ – ಮಾರಣಾಂತಿಕ ಹಲ್ಲೆ ಮಾಡಿದ ನೂತನ ಗ್ರಾಮ ಪಂಚಾಯತ ಸದಸ್ಯ

Suddi Sante Desk

ತುಮಕೂರು –


ನೂತನ ಗ್ರಾ.ಪಂ ಸದಸ್ಯನಿಂದ ಸೋತ ಅಭ್ಯರ್ಥಿ ಮೇಲೆ ಮಾರಣಾಂತಿಕ ಹಲ್ಲೆಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.ತುಮಕೂರಿನ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಗುಂಡಗಲ್ಲು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಲಾಂಗು, ಮಚ್ಚು ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆಯಾಗಿದೆ.ಸಾಲ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆಯಾಗಿದೆ‌.ಗುಂಡಗಲ್ಲು ಗ್ರಾಮದ ವಾಸಿ ನರಸಪ್ಪ ಎಂಬ ವ್ಯಕ್ತಿ ಮೇಲೆ ನೂತನ ಸದಸ್ಯ ಲಕ್ಷ್ಮೀನಾರಾಯಣ ನಿಂದ ಸೋತ ಅಭ್ಯರ್ಥಿ ನರಸಪ್ಪನ ಮೇಲೆ ಹಲ್ಲೆಯಾಗಿದೆ.

ಚುನಾವಣೆಗೂ ಮುನ್ನ ಲಕ್ಷ್ಮೀನಾರಾಯಣಗೆ ಸಾಲವಾಗಿ ಹಣವನ್ನು ನರಸಪ್ಪ ನೀಡಿದ್ದನಂತೆ. ನೂತನ ಸದಸ್ಯನ ಜೊತೆ ಗಂಗಪ್ಪ, ನರೇಂದ್ರ ಬಾಬು, ಗಂಗಾಧರಪ್ಪ, ನಾರಾಯಣಪ್ಪ ಸೇರಿ ಹಲ್ಲೆಯನ್ನು ಮಾಡಿದ್ದಾರೆ.ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.