ಸದನದಲ್ಲಿ ಶರ್ಟ್ ಬಿಚ್ಚಿ ಹೋರಾಟ – ಹೀಗೆ ಮಾಡಿದ ಶಾಸಕರಿಗೆ ಶಿಕ್ಷೆ ಕೊಟ್ಟ ಸಭಾಪತಿ

Suddi Sante Desk

ಬೆಂಗಳೂರು –

ಭದ್ರಾವತಿಯಲ್ಲಿ ದಾಖಲಾದ ಪ್ರಕರಣ ಕುರಿತು ತಮ್ಮ ಮೇಲೆ ಬೇಕು ಬೇಕೆಂದು ಪ್ರಕರಣ ದಾಖಲಿಸಿ ದ್ದಾರೆ ಎಂದು ಆರೋಪಿಸಿದ ಭದ್ರಾವತಿ ಶಾಸಕ ಸಂಗಮೇಶ್‌ ಅವರು ಶರ್ಟ್‌ ತೆಗೆದು ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟನೆ ನಡೆಸಿದರು. ಸದನದಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ ನಡೆಸಿದ ಭದ್ರಾವತಿ ಶಾಸಕ ಸಂಗಮೇಶ್‌ ಅವರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಯಿತು.

ಈ ವೇಳೆ ಮಾತನಾಡಿದ್ದ ಸ್ಫಿಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ಭದ್ರಾವತಿ ಜನರಿಗೆ ಅವಮಾನಿಸಿದ್ದೀರಿ. ನಿಮ್ಮ ಸ್ಥಾನ ಏನು ಗೊತ್ತಿದೆಯಾ ಎಂದು ಗರಂ ಆದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಅವರನ್ನು ಪ್ರಶ್ನಿಸಿದ ಕಾಗೇರಿ ಅವರು ಸಂಗಮೇಶ್‌ ಅವರಿಗೆ ಬುದ್ದಿ ಹೇಳುವಂತಿ ತಿಳಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಮಧ್ಯಪ್ರವೇಶಿಸಿ ಸಂಗಮೇಶ್‌ ಅವರ ಶರ್ಟ್‌ ಹಾಕಿಸಿದರು. ಭದ್ರಾವತಿಯಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ನಡೆದ ಘರ್ಷಣೆ ಹಿನ್ನೆಲೆ ಸಂಗಮೇಶ್‌ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.