ಕೊನೆಗೂ ಮೌನ ಮುರಿದ ರಮೇಶ್ ಜಾರಕಿಹೊಳಿ

Suddi Sante Desk

ಬೆಂಗಳೂರು –

ಸೆಕ್ಸ್ ಸಿಡಿ ವಿಚಾರ ನನಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು.ಈ ಕುರಿತಂತೆ ನನ್ನ ಸಹೋದರ ಕೂಡಾ ನನ್ನ ಗಮನಕ್ಕೆ ತಗೆದುಕೊಂಡು ಬಂದಿದ್ದರು. ಆದರೂ ನಾನು ಈ ಒಂದು ಪ್ರಕರಣದಲ್ಲಿ ತಪ್ಪು ಮಾಡಿಲ್ಲ ಇದೊಂದು ನಕಲಿ ಸಿಡಿಯಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.ಬೆಂಗಳೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಿಡಿ ಜಾತಕವನ್ನು ವಿವರಿಸಿದರು.

ಈ ಒಂದು ಸಿಡಿ ಇದೊಂದು 100 ಕ್ಕೆ ನೂರರಷ್ಟು ನಕಲಿ ಸಿಡಿಯಾಗಿದೆ. ಮೊದಲು ನಾನು ತುಂಬಾ ದುಖಃದಲ್ಲಿದ್ದೇನೆ. ಇನ್ನೂ ಈ ಒಂದು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ನನಗೆ ತುಂಬಾ ಧೈರ್ಯವನ್ನು ತುಂಬಿದ್ದಾರೆ ಅವರಿಗೆ ನಾನು ತುಂಬಾ ತುಂಬಾ ಆಭಾರಿಯಾಗಿದ್ದೇನೆ ಎಂದರು.

ಇನ್ನೂ ನಾನು ಈ ಒಂದು ಪ್ರಕರಣದಲ್ಲಿ ನಿರಪರಾಧಿಯಾಗಿದ್ದು ಇದರಲ್ಲಿ ರಾಜಕೀಯ ಷಂಡ್ಯತ್ರವೊಂದು ಅಡಗಿದೆ.ಈ ಒಂದು ಸಿಡಿಯಲ್ಲಿ ಸತ್ಯ ಯಾವುದು ಇಲ್ಲ. ಇದರಿಂದ ತುಂಬಾ ತುಂಬಾ ನಾನು ನೊಂದಕೊಂಡಿದ್ದು ಮಾನಸಿಕವಾಗಿ ಆಘಾತಗೊಂಡಿದ್ದೇನೆ. ಈ ಹಿಂದೆ ನನ್ನ ಸಹೋದರ ಕೇಳಿದಾಗ ಇದರಲ್ಲಿ ನಾನೇನು ತಪ್ಪು ಮಾಡಿಲ್ಲ ಎಂದಿದ್ದೇ ಎನ್ನುತ್ತಾ ಮಾತನಾಡುತ್ತಾ ಕಣ್ಣೀರು ಹಾಕಿದರು ಗೋಕಾಕ್ ಸಾಹುಕಾರ್.

ಈ ಕೇಸ್ ನಲ್ಲಿ ಕಾಣದ ಕೆಲ ಕೈಗಳಿದ್ದು ಅವರು ಯಾರು ಅಂತಾ ಹೇಳೊದಿಲ್ಲ ಎಂದರು. ಯಾರೇ ಆಗಿರಲಿ ಎಷ್ಟೇ ಖರ್ಚಾಗಲಿ ನಾನು ಸುಮ್ಮನೇ ಬಿಡೊದಿಲ್ಲ ಸುಮ್ಮನೇ ಬಿಡೊದಿಲ್ಲ ಅವರನ್ನು ನಾನು ಜೈಲಿಗೆ ಹಾಕಿಸುತ್ತೇನೆ. ನನ್ನ ವಿರುದ್ದ ಷಡ್ಯಂತ್ರ ಮಾಡಿದವ ರನ್ನು ನಾನು ಸುಮ್ಮನೇ ಬಿಡೊದಿಲ್ಲ. ಈ ಒಂದು ಷಡ್ಯಂತ್ರ ಯಶವಂತಪುರ ಒಂದರ ಕಟ್ಟಡದ ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಮತ್ತು ಹುಳಿಮಾವಿ ನಲ್ಲಿ ನಡೆದಿದೆ.ಇನ್ನೂ ರಾಜಕೀಯ ವಾಗಿ ನನ್ನನ್ನು ಮುಗಿಸಲು ನೂರಾರು ಕೋಟಿ ರೂಪಾಯಿ ಖರ್ಚ ಮಾಡುತ್ತಿದ್ದಾರೆಂದರು. 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.