ನ್ಯಾಯಾಲಯ ಆವರಣದಲ್ಲಿ ಹಾಡು ಹಗಲೇ ನ್ಯಾಯವಾದಿ ಹತ್ಯೆ – ಬೆಚ್ಚಿ ಬಿದ್ದ ಹೊಸಪೇಟೆ ಜನರು

Suddi Sante Desk

ಹೊಸಪೇಟೆ –

ಹಾಡು ಹಗಲೇ ನ್ಯಾಯಾಲಯದ ಆವರಣದಲ್ಲೇ ನ್ಯಾಯವಾದಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹೊಸಪೇಟೆ ಯಲ್ಲಿ ನಡೆದಿದೆ.

ಆಸ್ತಿ ವೈಷಮ್ಯದ ಶಂಕೆ ಹಿನ್ನಲೆಯಲ್ಲಿ ಈ ಒಂದು ಕೊಲೆ ನ್ಯಾಯಾಲಯದ ಆವರಣದಲ್ಲೇ ನಡೆದಿದೆ. ನ್ಯಾಯವಾದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ತಾರಿಹಳ್ಳಿ ವೆಂಕಟೇಶ್ (43) ಕೊಲೆಯಾದ ನ್ಯಾಯವಾದಿಯಾಗಿದ್ದಾರೆ.

ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ಈ ಒಂದು ಘಟನೆ ನಡೆದಿದೆ.ಮಚ್ಚಿನಿಂದ ಕುತ್ತಿಗೆ ತಲೆಗೆ,ಹಾಗೂ ಮುಖಕ್ಕೆ ಕೊಚ್ಚಿ ಪರಾರಿಯಾಗು ವಾಗ ಆಗಂತುಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ

ಹಾಡು ಹಗಲೇ ಈ ಒಂದು ಕೊಲೆಯಿಂದ ಬೆಚ್ಚಿ ಬಿದ್ದಿದ್ದಾರೆ ಹೊಸಪೇಟೆ ನಾಗರೀಕರು. ಕೊಲೆಯಾಗಿ ರುವ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಕೂಡ ಆಗಿದ್ದಾರಂತೆ.

ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಪ್ರಕರಣ ಕುರಿತು ಒರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ ಪೊಲೀಸರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.