ಗನ್ ಮ್ಯಾನ್ ಆತ್ಮಹತ್ಯೆ – ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Suddi Sante Desk

ಬೆಂಗಳೂರು –

ಖಾಸಗಿ ಗನ್ ಮ್ಯಾನ್ ವೊಬ್ಬರು ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ‌.ಬೆಂಗಳೂರಿನ ಬಸವೇ ಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿದ್ದು ಬಸವೇಶ್ವರನಗರ 4ನೇ ಹಂತದ ನಿವಾಸಿ ಕಮಲಾಕರ್, ಪತ್ನಿ ಹಾಗೂ ಮೂರು ವರ್ಷದ ಮಗು ಜೊತೆ ವಾಸವಿದ್ದರು.

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಕಮಲಾಕರ್ ಮಡಿವಾಳ (29) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನೂ ಪರವಾನಗಿ ಪಿಸ್ತೂಲ್ ಪಡೆದಿದ್ದ ಕಮಲಾಕರ್, ಖಾಸಗಿ ಗನ್‌ಮ್ಯಾನ್ ಆಗಿದ್ದರು. ಗಣ್ಯರು, ಉದ್ಯಮಿಗಳು ಹಾಗೂ ಇತರರ ಬಳಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದು ವಿಷಯ ತಿಳಿಸ ಬಸವೇಶ್ವರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.