This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರಿ ನಿಧನ – ಕಟ್ಟಡ ದುರುರಂತದಲ್ಲಿ ಮೊದಲನೇಯ ಆರೋಪಿಯಾಗಿದ್ದ ಗಂಗಪ್ಪ ಶಿಂತ್ರಿ

WhatsApp Group Join Now
Telegram Group Join Now

ಧಾರವಾಡ –

ಮಾಜಿ ಸಚಿವ ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರಿ ನಿಧನರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಸವದತ್ತಿಯ ನಿವಾಸದಲ್ಲಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ಹೆಂಡತಿ ಶಿವಲೀಲಾ ವಿನಯ ಕುಲಕರ್ಣಿ ಅವರ ತಂದೆಯಾಗಿದ್ದಾರೆ ಗಂಗಪ್ಪ ಶಿಂತ್ರಿ . ಇನ್ನೂ 2019 ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಕುಮಾರೇಶ್ವರ ನಗರದಲ್ಲಿ ಕುಸಿತಗೊಂಡ ಬಹುಮಹಡಿ ಕಟ್ಟಡದ ದುರಂತದಲ್ಲಿ 19 ಜನರು ಸಾವಿಗೀಡಾಗಿದ್ದರು.

ಈ ಒಂದು ಪ್ರಕರಣದಲ್ಲಿ ಮೊದಲನೇಯ ಆರೋಪಿಯಾಗಿದ್ದರು ಗಂಗಪ್ಪ ಶಿಂತ್ರಿ. ಸಧ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದರು, ಇನ್ನೂ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಅಳಿಯ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರಿದ ಮೇಲೆ ಮತ್ತು ಜಾಮೀನು ಅರ್ಜಿ ವಜಾಗೊಂಡ ಮೇಲೆ ತುಂಬಾ ನೊಂದಕೊಂಡಿದ್ದರು.

ಇವೆಲ್ಲದರ ನಡುವೆ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಗಂಗಪ್ಪ ಶಿಂತ್ರಿ ಮನೆಯಲ್ಲಿಯೇ ನಿಧನರಾಗಿದ್ದಾರೆ. ಸಂಜೆ ಸವದತ್ತಿಯ ಅವರ ತೋಟದ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.


Google News

 

 

WhatsApp Group Join Now
Telegram Group Join Now
Suddi Sante Desk