ವರ್ಗಾವಣೆಯ ಸಂದೇಶದ ಬೆನ್ನಲ್ಲೇ ಬುಗಿಲೆದ್ದ ಆಕ್ರೋಶ ಸೇವಾನಿರತ ಪದವೀಧರ ಶಿಕ್ಷಕ ರಿಂದ ಜುಲೈ 5 ರಂದು ರಾಜ್ಯಾ ದ್ಯಂತ ಹೋರಾಟಕ್ಕೆ ಕರೆ…..

Suddi Sante Desk

ಬೆಂಗಳೂರು –

6 ರಿಂದ 8 ನೇ ತರಗತಿ ಬೋಧನೆ ಗೆ ಬಹಿಷ್ಕಾರ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ(ರಿ) ರಾಜ್ಯ ಘಟಕ ಧಾರವಾಡ ಕರೆ

ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ವಿಶೇಷ ಸೂಚನೆ ‌ನೀಡಿದ ರಾಜ್ಯ ಘಟಕ

ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಯ ಸಂದೇಶ ಹೊರಗೆ ಬರುತ್ತಿದ್ದಂತೆ ಇತ್ತ ಆಕ್ರೋಶ ಬುಗಿಲೆದ್ದಿದೆ ಹೌದು ಈಗಾಗಲೇ ರಾಜ್ಯದಲ್ಲಿನ ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ನೀಡಿ ರುವ ಹಿಂಬಡ್ತಿ ವಿರೋಧಿಸಿ ನಮ್ಮ ಸಂಘಟನೆ ನಿರಂತರ ಹೋರಾಟ ಪ್ರಯತ್ನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿ ಸುವ ಉದ್ದೇಶದಿಂದ ಕಡ್ಡಾಯವಾಗಿ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕಾರ ಹಮ್ಮಿಕೊ ಳ್ಳುವ ವಿಷಯವನ್ನು ಮುಂಚಿತವಾಗಿ ತಮ್ಮ ವ್ಯಾಪ್ತಿ ಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಇಲಾಖೆ ಗಮನಕ್ಕೆ ತರುವುದು ಕಡ್ಡಾಯವಾಗಿರುವು ದರಿಂದ KSPSGTA ರಾಜ್ಯ ಘಟಕ ನೀಡಿರುವ ಮನವಿ ಪತ್ರವನ್ನು ತಾಲ್ಲೂಕು ಜಿಲ್ಲಾ ಘಟಕಗಳು ತಮ್ಮ ಪದವೀಧರ ಶಿಕ್ಷಕರ ಜೊತೆಗೂಡಿ ರಾಜ್ಯಾ ದ್ಯಂತ ಏಕ ಕಾಲದಲ್ಲಿ ಜುಲೈ – 05 ರಂದು ಮನವಿ ಸಲ್ಲಿಸಿ ಸ್ವೀಕೃತಿ ಪಡೆಯುವುದು ಹಾಗೂ ಮುಂದಿನ ರಾಜ್ಯ ಹಂತದ 6-8 ತರಗತಿ ಪಾಠ ಬೋಧನೆ ಬಹಿ ಷ್ಕಾರದ ಬಗ್ಗೆ ಪ್ರತಿಯೊಬ್ಬ ಪದವೀಧರ ಶಿಕ್ಷಕರಿಂದ ಒಪ್ಪಿಗೆ ಪತ್ರ ಬರೆಸಿಕೊಂಡು ಜಿಲ್ಲಾ ಘಟಕದ ಮೂಲಕ ರಾಜ್ಯ ಘಟಕಕ್ಕೆ ಕಳುಹಿಸಿಕೊಡುವುದು ಇಂತಹ ತೀರ್ಮಾನವನ್ನು ಸೇವಾ ನಿರತ ಪದವೀಧರ ಶಿಕ್ಷಕರು ತೀರ್ಮಾನವನ್ನು ತಗೆದುಕೊಂಡಿದ್ದು ಮುಂದೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.