BEO ಬ್ರಹ್ಮಾಂಡ ಭ್ರಷ್ಟಾಚಾರ ಬಿಚ್ಚಿಟ್ಟ ಶಿಕ್ಷಕಿ – BEO, CRP ಗಳ ಹಣ ವಸೂಲಿ ದಂಧೆಯನ್ನು ಇಂಚಿಂಚೂ ಬಿಚ್ಚಿಟ್ಟ ಆ ಶಿಕ್ಷಕಿ…..

Suddi Sante Desk

ಚಿಕ್ಕಬಳ್ಳಾಪೂರ –

ಚಿಕ್ಕಬಳ್ಳಾಪೂರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶಿಕ್ಷಣ ಇಲಾಖೆಯ ಬಿಇಒ ಮತ್ತು ಸಿಆರ್ ಪಿ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರವನ್ನು ನಿವೃತ್ತ ಶಿಕ್ಷಕಿಯೊಬ್ಬರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಹೌದು ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ‌ ಆರೋಪ ಈಗ ಕೇಳಿ ಬಂದಿದೆ.ನಿವೃತ್ತ‌ ಶಿಕ್ಷಕರ ಗಳಿಕೆಯ ರಜೆ ಬಿಲ್ ಕ್ಲಿಯರ್ ಮಾಡಲು ಲಂಚ ಹಳೆಯ ಬಿಸಿ ಊಟದ ಬಿಲ್ ಕ್ಲಿಯರ್ ಮಾಡಲುವ ನಿವೃತ್ತಿ ಶಿಕ್ಷಕರಿಂದ ಹಣ ಪೀಕುವ ಬಿಇಒ ನಿವೃತ್ತಿ ಹೊಂದಿದ ಶಿಕ್ಷಕ,ಶಿಕ್ಷಕಿ ಯರಿಂದ ಹಣವಸೂಲಿಗಿಳಿದ್ದಾರೆ ಎಂದು ನಿವೃತ್ತಿ ಶಿಕ್ಷಕಿ ಆರೋಪ ಮಾಡಿದ್ದಾರೆ.

ಶಿಕ್ಷಕಿ

ಚಿಂತಾಮಣಿ ಬಿಇಒ ಸುರೇಶ್ ಕುಮಾರ್ ರಿಂದ ಹಣ ವಸೂಲಿ ಆರೋಪ ಕೇಳಿ ಬಂದಿದೆ.ಬಿಇಒ ಸುರೇಶ್ ಕುಮಾರ್ ನ ಭ್ರಷ್ಟಾಚಾರ ಬಾಯಿಬಿಟ್ಟಿ ದ್ದಾರೆ ನಿವೃತ್ತ ಶಿಕ್ಷಕಿ.ನಿವೃತ್ತ ಶಿಕ್ಷಕರ ಉಪಲಬ್ದಗಳ ಕ್ಲೀಯರ್ ಗೆ ಬಿಇಒ ಗೆ ಕೊಡ್ಬೇಕಂತೆ ಸಾವಿರ ಸಾವಿರ ಕಂತು ಕಂತು ನೋಟು.ನಿವೃತ್ತಿ ಹೊಂದಿದ ತಕ್ಷಣ ಶಾಲೆಗೆ ಡೊನೇಷನ್ ರೂಪದಲ್ಲಿ ಹಣ ಕೊಡ್ಬೇಕಂತೆ.

ಡೊನೇಷನ್ ಸೇರೋದು ಮಾತ್ರ ಸಿ ಆರ್ ಮೂಲಕ ಬಿಇಒ ಜೇಬಿಗೆ ಡೊನೇಷನ್ ವಸೂಲಿ ಮಾಡುವ ಬಗ್ಗೆ ಸರ್ಕಾರಿ ನೌಕರರ ಸಂಘದಿಂದ ದೂರು ಬಿಇಒ ಮೇಲೆ ತನಿಖೆ ಹಂತದಲ್ಲಿರುವ ಡೊನೇಷನ್ ಕೇಸ್. ಬಿಇಒ ಗೆ ಹಿಡಿ ಶಾಪ ಹಾಕುತ್ತಿದ್ದಾರೆ ಶಿಕ್ಷಕರು.

ಸಧ್ಯ ಇವರ ಅತಿಯಾದ ಭ್ರಷ್ಟಾಚಾರದಿಂದಾಗಿ ಸಹ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಿಆರ್ ಪಿ ಮತ್ತು ಬಿಇಒ.ಈ ಕೂಡಲೇ ಕ್ರಮ ಕೈಗೊಳ್ಳಬೇಕಿ ರುವ ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಗಪ್ ಚುಪ್ ಆಗಿದ್ದಾರಂತೆ.ಕಂಡು ಕಾಣದಂತೆ ಇರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.