ವರ್ಗಾವಣೆ ವಿಚಾರದಲ್ಲಿ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಸಚಿವರು – ವರ್ಗಾವಣೆ ಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಎಂದರು ಶಿಕ್ಷಣ ಸಚಿವ ಬಿ ಸಿ ನಾಗೇಶ್…..

Suddi Sante Desk

ಗುಲಬರ್ಗಾ –

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮುಂದಾಗಿದ್ದಾರೆ.ಗುಲಬರ್ಗಾ ದಲ್ಲಿ ಮಾತನಾಡಿದ ಅವರು ಶಿಕ್ಷಕರ ವರ್ಗಾವಣೆ ಎಂಬೊದು ಮುಗಿಯದಿರೋ ದೊಡ್ಡ ಪ್ರಮಾಣದ ಕೆಲಸವಾಗಿದೆ ಎಂದರು.

ಹೀಗಾಗಿ ನಾನು ಇಲಾಖೆಗೆ ಬಂದ ಕೂಡಲೇ ಮೊದಲು ದೊಡ್ಡ ಪ್ರಮಾಣದ ಸಮಸ್ಯೆ ಯಾಗಿದ್ದು ಈ ಒಂದು ವರ್ಗಾವಣೆ ವಿಚಾರ ಹೀಗಾಗಿ ಈ ಒಂದು ವರ್ಗಾವಣೆ ಕುರಿತು ಗಂಭೀರವಾಗಿ ಚಿಂತನೆ ಮಾಡಿ ಶಾಶ್ವತ ಪರಿಹಾರ ಕಂಡು ಹಿಡಿಯಲು ಎಲ್ಲಾ MLC ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಚನೆ ಮಾಡಲಾಗಿದ್ದು ಶೀಘ್ರದಲ್ಲೇ ಅಂತಿಮ ಮಾಡೊದಾಗಿ ಹೇಳಿದರು

ಇದರೊಂದಿಗೆ ನೂತನ ಶಿಕ್ಷಣ ಸಚಿವರ ಸಧ್ಯ ನಾಡಿನ ಶಿಕ್ಷಕರಿಗೆ ದೊಡ್ಡ ಪ್ರಮಾಣದ ತಲೆ ನೋವಿನ ಕೆಲಸವಾಗಿರುವ ವರ್ಗಾವಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ ಇದರಿಂದಾದರೂ ವರ್ಗಾವಣೆಗೆ ಶಾಶ್ವತ ಪರಿಹಾರ ದೊಂದಿಗೆ ನೆಮ್ಮದಿ ಸಿಗಲಿ ಎಂಬುದು ಸುದ್ದಿ ಸಂತೆ ಯ ಆಶಯ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.