ಶಿಕ್ಷಕರಿಗೆ ಆತ್ಮೀಯ ಸನ್ಮಾನ ಗೌರವ – ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ಕರೆ…..

Suddi Sante Desk

ಬಂಟ್ವಾಳ –

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಜೊತೆಗೆ ಶಿಕ್ಷಕರು ಮತ್ತು ಮಕ್ಕಳ ಪೋಷಕರು ಕೈಜೋಡಿಸಬೆಕು ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಗೇಟು ಉದ್ಘಾಟಿಸಿ ಅವರು ಮಾತನಾಡಿದರು.ಇದೇ ವೇಳೆ ದಾನಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ಪೂಜಾರಿ ಮತ್ತು ನಿವೃತ್ತಿಗೊಂಡ ಶಿಕ್ಷಕ ನಾರಾಯಣ ಗೌಡ ಅವರನ್ನು ಸನ್ಮಾನಿಸಿದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಪ್ರಮುಖರಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ,ಪ್ರಾಂಶುಪಾಲ ರಾಮಕೃಷ್ಣ ಮಡಿಕೇರಿ, ಶಿಕ್ಷಣ ಸಂಯೋಜಕಿ ನಳಿನಿ ಕೆ.ಸುಳ್ಯ ಇದ್ದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋನಪ್ಪ ದೇವಸ್ಯ, ಸದಸ್ಯರಾದ ಪುರುಷೋತ್ತಮ,ನಳಿನಾಕ್ಷಿ,ಸರೋಜಿನಿ, ಜಯಂತಿ ವೀರಕಂಭ ಇದ್ದರು. ಮುಖ್ಯಶಿಕ್ಷಕ ಕಮಲಾಕ್ಷ ಶಂಭೂರು,ಸುಜಾತಾ ಎಂ.ಚಿದಾನಂದ ಕೆ.ಸದಾಶಿವ ನಾಯ್ಕ್ ವಿಟ್ಲ,ಗಿರೀಶ ಮಡಿಕೇರಿ ಅನಿಸಿಕೆ ವ್ಯಕ್ತಪಡಿಸಿ ದರು.

ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಟೈಲರ್ ಸ್ವಾಗತಿಸಿದರು.ಪ್ರಭಾರ ಮುಖ್ಯಶಿಕ್ಷಕಿ ವಿದ್ಯಾಲತಾ ಪ್ರಾಸ್ತಾವಿಕ ಮಾತನಾಡಿದರು.ಶಿಕ್ಷಕ ಸತ್ಯಶಂಕರ್ ವಂದಿಸಿ ದರು.ಶಂಕರ ಪಾವಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.