ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ಡಿಕ್ಕಿ – ಐವರ ಸ್ಥಿತಿ ಗಂಭೀರ – ನಾಲ್ಕು ಘಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಸಿಲುಕಿಕೊಂಡವನ ರಕ್ಷಣೆ

Suddi Sante Desk

ಹಾವೇರಿ –

ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಕ್ರೂಸರ್ ವೊಂದು ಡಿಕ್ಕಿಯಾದ ಘಟನೆ ಹಾವೇರಿ ಯಲ್ಲಿ ನಡೆದಿದೆ‌‌. ಹಾವೇರಿಯ ಸಾರಿಗೆ ಕಚೇರಿಯ ಹಿಂದೆ ಈ ಒಂದು ಅಪಘಾತ ನಡೆದಿದೆ.ಘಟನೆ ಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು ಇಬ್ಬರಿಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನೂ ಕ್ರೂಸರ್ ನಲ್ಲಿ ಸಿಕ್ಕು ಓರ್ವನು ನಾಲ್ಕು ಘಂಟೆಗಳ ಕಾಲ ಪರದಾಡಿದ ಚಿತ್ರಣ ಕಂಡು ಬಂದಿತು.ಹಾವೇರಿ ನಗರದ ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಘಟನೆ ಕಂಡು ಬಂದಿತು.
ಸತೀಶ ಕಾಸರಕರ 43 ವರ್ಷ ಕ್ರೂಸರ್ ನಲ್ಲಿ ಸಿಕ್ಕು ಪರದಾಡಿದ್ದಾನೆ. ಕ್ರೂಸರ್ ನಲ್ಲಿ ಸಿಲುಕಿರೋ ಸತೀಶನನ್ನ ಹೊರತೆಗೆಯಲು 108 ಸಿಬ್ಬಂದಿ ಹಾಗೂ ಪೊಲೀಸರ ಹರಸಾಹಸ ಪಟ್ಟು ಕೊನೆಗೂ ಹೊರತಗೆದರು.ನಜ್ಜುಗುಜ್ಜಾಗಿರೋ ವಾಹನದಲ್ಲಿ ಕಾಲು ಸಿಲುಕಿದ್ದರಿಂದ ಪರದಾಡಿದ ಸತೀಶ್.
ಗಂಭೀರವಾಗಿ ಗಾಯಗೊಂಡಿರೋ ಇಬ್ಬರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮಹಾರಾಷ್ಟ್ರ ಮೂಲದ ಕ್ರೂಸರ್ ವಾಹನವಾಗಿದೆ‌.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ಈ ಒಂದು ದುರ್ಘಟ‌ನೆ ನಡೆದಿದೆ.ಹಾವೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. 108 ಸಿಬ್ಬಂದಿಗಳಾದ ಶಂಕರ್ ಲಮಾಣಿ, ತೌಫಿಕ್ ಪಠಾಣ್ ಇವರು ಜಿಲ್ಲಾ ವ್ಯವಸ್ಥಾಪಕರಾದ ಪ್ರಭಾಕರ ತಳವಾರ ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.ಒಟ್ಟು ಒಂಬತ್ತು ಜನರು ಪ್ರಯಾಣ ಬೆಳೆಸಿದ್ದರು.ಇದರಲ್ಲಿ ನಾಲ್ಕೈದು ಜನರಿಗೆ ತೀವ್ರವಾಗಿ ಗಾಯಗೊಂಡಿದ್ದು ಇನ್ನಿಬ್ಬರಿಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.