ಮತ್ತೊಮ್ಮೆ CM ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ನಿಯೋಗ – ತುರ್ತಾಗಿ ಭೇಟಿಯಾಗಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಒತ್ತಾಯಿಸಿದ ಷಡಾಕ್ಷರಿ ಯವರ ನೇತ್ರತ್ವದಲ್ಲಿನ ಟೀಮ್…..

Suddi Sante Desk
ಮತ್ತೊಮ್ಮೆ CM ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ನಿಯೋಗ – ತುರ್ತಾಗಿ ಭೇಟಿಯಾಗಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಒತ್ತಾಯಿಸಿದ ಷಡಾಕ್ಷರಿ ಯವರ ನೇತ್ರತ್ವದಲ್ಲಿನ ಟೀಮ್…..

ಬೆಂಗಳೂರು

ರಾಜ್ಯ ಸರ್ಕಾರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ  ಸಿ ಎಸ್ ಷಡಾಕ್ಷರಿಯವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ಯನ್ನು ಮಾಡಲಾಯಿತು ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರು ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಹಲವು ವಿಚಾರ ಗಳ ಕುರಿತು ಚರ್ಚಿಸಿದರು

ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಹಾಗೂ ತಾಲೂಕು, ಜಿಲ್ಲೆ ಶಾಖೆಗಳ ಚುನಾಯಿತ ನಿರ್ದೇಶಕ ಪದಾಧಿಕಾರಿಗಳ ಸಮಾವೇಶದಲ್ಲಿ ವರ್ಚುವಲ್ ಮೂಲಕ ಸಂಘದ ಮುಖ್ಯ ಬೇಡಿಕೆಗಳಾದ ಎನ್‌ಪಿಎಸ್ (NPS) ರದ್ದತಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಶೀಘ್ರ ಜಾರಿಗಾಗಿ ಕೈಗೊಂಡಿ ರುವ ಸರ್ಕಾರದ ಕ್ರಮಗಳ ಕುರಿತು ಮತ್ತು ಸಂಘದ ಚಟುವಟಿಕೆಗಳು,ಪ್ರಯತ್ನಗಳ ಕುರಿತು ಮಾತನಾಡಿದ ಹಿನ್ನೆಲೆ ಯಲ್ಲಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು*

ಸಮಾವೇಶದಲ್ಲಿ ವರ್ಚುಯಲ್ ಮೂಲಕ ತಾವುಗಳು ಮಾತನಾಡಿ ನಮ್ಮ ಸಂಘದ ಪದಾಧಿಕಾರಿಗಳು ಮತ್ತು ನೌಕರರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ್ದೀರಿ ಹಾಗೂ ನೌಕರರ ಸಂಘದ ಮುಖ್ಯ ಬೇಡಿಕೆಗಳಾದ ಎನ್ ಪಿಎಸ್ (NPS) ರದ್ದತಿ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಮುಖ್ಯಮಂತ್ರಿ” ಯವರಿಗೆ ರಾಜ್ಯಾಧ್ಯಕ್ಷರಾದ “ಸಿ ಎಸ್ ಷಡಾಕ್ಷರಿ” ರವರು ಮನವಿ ಮಾಡಿದರು*

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬೈರಪ್ಪನವರು, ನೌಕರರ ಸಂಘದ ಸದಸ್ಯರು ಹಾಜರಿದ್ದರು .

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.