ಜಾತ್ರೆಯಲ್ಲೂ ಮತ್ತೆ CM ಸಿದ್ದರಾಮಯ್ಯ ಕೂಗು ಸಿದ್ದರಾಮಯ್ಯ ಮತ್ತೆ ಸಿಎಮ್ ಆಗಲಿ ಎಂದು ದೇವಿಯ ರಥಕ್ಕೆ ಬಾಳೆಹಣ್ಣು ಎಸೆದ ಭಕ್ತ…..

Suddi Sante Desk

ರಾಯಚೂರು –

2023 ಕ್ಕೆ ರಾಜ್ಯಕ್ಕೆ ಮತ್ತೆ ಮುಖ್ಯಮಂತ್ರಿ ಯಾರು ಆಗ್ತಾರೆ ಎಂಬ ಚರ್ಚೆ ಮಾತುಗಳು ನಡೆಯುತ್ತಿವೆ.ರಾಜಕೀಯ ಪಕ್ಷದವರ ನಡುವೆ ಒಂದು ಕಡೆಯಾದರೆ ಇನ್ನೂ ರಾಜ್ಯದ ಜನತೆಗೆ ಕೂಡಾ ಇದು ಕಾಡುತ್ತಿದೆ.

ಇದೇಲ್ಲ ಸಧ್ಯ ಕಂಡು ಬರುತ್ತಿರುವ ಮಾತು ಆದರೆ ಇನ್ನೂ ರಾಜ್ಯಕ್ಕೆ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗ ಲೆಂದು ಭಕ್ತರೊಬ್ಬರು ಬಾಳೆಹಣ್ಣಿನಿಲ್ಲಿ ಬರೆದು ದೇವಿಗೆ ಎಸೆದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಹೌದು ಜಾತ್ರೆಯಲ್ಲೂ ಮತ್ತೆ ಸಿ.ಎಮ್.ಸಿದ್ದರಾಮಯ್ಯ ಕೂಗು ಕೇಳಿ ಬಂದಿದೆ.ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ದೇವಿಯ ರಥಕ್ಕೆ ಬಾಳೆಹಣ್ಣು ಎಸೆದಿದ್ದಾರೆ ಭಕ್ತರು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಈ ಒಂದು ಚಿತ್ರಣ ಕಂಡು ಬಂದಿದೆ.

ನಿರುಪಾಧಿ ಎಂಬ ಸಿದ್ದರಾಮಯ್ಯ ನವರ ಅಭಿಮಾನಿ ಯಿಂದ ರಥೋತ್ಸವ ಕ್ಕೆ ಬಾಳೆಹಣ್ಣು ಎಸೆಯಲಾಗಿದೆ. ದುರ್ಗಾದೇವಿ ರಥಕ್ಕೆ ಮತ್ತೆ ಸಿದ್ದರಾಮಯ್ಯ ಸಿ.ಎಮ್ ಎಂದು ಬಾಳೆಹಣ್ಣು ಎಸೆದಿದ್ದಾರೆ ಅಭಿಮಾನಿಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.