This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಾಲೆಗಳ ಆರಂಭ ಕುರಿತಂತೆ ಶಿಕ್ಷಣ ಸಚಿವರಿಂದ ಕೆಲವೊಂದಿಷ್ಟು ಮಾತು – ಸಮಿತಿಯ ಅಭಿಪ್ರಾಯ ದಿಂದಲೇ ಈ ನಿರ್ಧಾರವೆಂದರು ಸಚಿವರು…..

WhatsApp Group Join Now
Telegram Group Join Now

ಚಿತ್ರದುರ್ಗ –

ತಾಂತ್ರಿಕ ಸಮಿತಿ, ಟಾಸ್ಕ್ ಫೋರ್ಸ್ ಹಾಗೂ‌ ಮಕ್ಕಳ ತಜ್ಞರ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ 9 ರಿಂದ 12 ನೇ ತರಗತಿಗಳನ್ನು ನಡೆಸಲು ಸರ್ಕಾರ ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಕಳೆದ ಒಂದೂವರೆ ವರ್ಷದಿಂದ ಕೊರೊನಾ ನಡುವೆಯೂ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸಲು ಆನ್ ಲೈನ್ ಸಾಕಷ್ಟು ಪ್ರಯತ್ನ ಮಾಡಿದ್ದೇವೆ.ಆದರೂ, ಶೇ.30 ರಿಂದ 40 ರಷ್ಟು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ ಎಂದರು.ಇನ್ನೂ SSLC ಪರೀಕ್ಷೆಗೆ ಶೇ.99 ರಷ್ಟು ಮಕ್ಕಳು ಹಾಜರಾಗಿ ದ್ದರು.ಪೋಷಕರು ಹಾಗು ಮಕ್ಕಳ ಧೈರ್ಯದ ಮೇಲೆ ಈಗ ಶಾಲೆ ಆರಂಭಿಸುತ್ತಿದ್ದೇವೆ.ಎಲ್ಲಾ ಕಡೆ ಡಿಡಿಪಿಐ, ಬಿಇಒ ಗಳ ಮೀಟಿಂಗ್ ನಡೆಸುತ್ತಿದ್ದೇನೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಕೊಂಡು 9,10,11 ಹಾಗು 12ನೇ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ ಎಂದರು.

ಇದರ ಯಶಸ್ಸಿನ ಆಧಾರದಲ್ಲಿ 1 ರಿಂದ 8 ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.ಒಂದು ವೇಳೆ ಮಕ್ಕಳು ಭಯ ದಿಂದ ಶಾಲೆಗೆ ಬರದಿದ್ದರೆ ಅವರ ಮನವೊಲಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ.ಯಾವುದೇ ಕಾರಣಕ್ಕೂ ಬಲವಂತ ಮಾಡುವುದಿಲ್ಲ. ಪೋಷಕರು ಒಪ್ಪದಿದ್ದರೆ ಅವರಿಗೆ ಆನ್ ಲೈನ್ ಮುಂದುವರೆಯುತ್ತದೆ. ಈ ಬಗ್ಗೆ ಆತಂಕ ಬೇಡ ಎಂದರು.ಒಂದು ವೇಳೆ ಶಾಲೆ ಆರಂಭವಾದ ನಂತರ ಯಾರಿಗಾದರೂ ಪಾಸಿಟಿವ್ ಬಂದರೆ,ಒಂದು ವಾರದ ಶಾಲೆ ಬಂದ್ ಮಾಡಿ ಸ್ಯಾನಿಟೈಸ್ ಮಾಡಿ ಮತ್ತೆ ಶಾಲೆ ಆರಂಭಿಸಲು ಸೂಚಿಸಿದ್ದೇವೆ.ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.‌ಬದರಿನಾಥ್,ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್ ಮತ್ತಿತರರಿದ್ದರು.ಪದವಿ ಪೂರ್ವ ಶಿಕ್ಷಣಕ್ಕೆ ಹೆಚ್ಚು ವಿದ್ಯಾರ್ಥಿಗಳು ಸೇರುವ ನಿರೀಕ್ಷೆ ಇದೆ. 8.75 ಲಕ್ಷ ಮಕ್ಕಳು ತೇರ್ಗಡೆಯಾಗಿ ದ್ದು ಎಲ್ಲರು ಕಾಲೇಜಿಗೆ ಬರುವುದಿಲ್ಲ.ಪಿಯುಸಿಗೆ 12 ಲಕ್ಷ ಮಕ್ಕಳು ಸೇರುವಷ್ಟು ವ್ಯವಸ್ಥೆ ಇದೆ.ರಾಜ್ಯದ ಕೆಲವೆಡೆ ಸಮಸ್ಯೆ ಆಗಬಹುದು.ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಡಿಡಿಪಿಐ ಗಳಿಗೆ ಸೂಚಿಸಿದ್ದೇವೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.


Google News

 

 

WhatsApp Group Join Now
Telegram Group Join Now
Suddi Sante Desk