This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ಪ್ರಾಧ್ಯಾಪಕ ಕೊಲೆ ಮಗ ಸೇರಿದಂತೆ ಮೂವರ ಬಂಧನ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಭೀಕರ ಕೊಲೆ…..

WhatsApp Group Join Now
Telegram Group Join Now

ಶಹಾಪುರ

ಹೌದು ಶಹಾಪೂರ ತಾಲೂಕಿನ ಕೊಳ್ಳೂರ(ಎಂ) ವ್ಯಾಪ್ತಿ ಯಲ್ಲಿ ಮೇ 12ರಂದು ನಡೆದ ಉಪನ್ಯಾಸಕ ಮಾನಪ್ಪ ತಿಪ್ಪಣ್ಣ ಗೋಪಾಳಪೂರಕರ್‌ (59) ಎಂಬುವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಯಾದಗಿರಿ ಉಪ ವಿಭಾಗ ಮತ್ತು ಸುರಪುರ ವಿಭಾಗದ ಪ್ರಭಾರಿ ಉಪ ಅಧಿಧೀಕ್ಷಕ ಜೇಮ್ಸ್‌ ಮಿನೇಜೆಸ್‌ ಅವರ ಮಾರ್ಗದರ್ಶನದ ಪೊಲೀಸ್‌ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾ ‌ಗಿದ್ದಾರೆ.ಹತ್ಯೆಯಾದ ಉಪನ್ಯಾಸಕರ ಮೊದಲನೇ ಪತ್ನಿಯ ಮಗ ಬಸಲಿಂಗಪ್ಪ ಅವರ ಸ್ನೇಹಿತರಾದ ಕಲಬುರಗಿಯ ಮಾರಜಿ ನಗರದ ಸುರೇಶ ಶಂಭುಲಿಂಗ ಕುಂಟೆ (23) ಮತ್ತು ಮಾದೇಶ ಕಟ್ಟಿಮನಿ(20)ಎಂಬುವರನ್ನು ಬಂಧಿಸ ಲಾಗಿದೆ.

ಕೊಲೆಯಾದ ಉಪನ್ಯಾಸಕ ಮಾನಪ್ಪ ಗೋಪಾಳಪುರ ಅವರ ಮೊದಲನೇಯ ಪತ್ನಿಯ ಮಗ ಬಸಲಿಂಗಪ್ಪ ರಾಜೂ ಮಾನಪ್ಪ ಗೋಪಾಳಪುರ (27) ಈತನನ್ನು ಮೇ 31ರಂದು ಠಾಣೆಗೆ ತಂದು ವಿಚಾರಿಸಿದಾಗ ಸ್ನೇಹಿತರಿಬ್ಬರ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ಪತ್ನಿ ತವರೂರಾದ ತಾಲೂಕಿನ ಹಯ್ನಾಳ(ಬಿ) ಗ್ರಾಮಕ್ಕೆ ಉಪನ್ಯಾಸಕ ಮಾನಪ್ಪ ಹೊರಟಿದ್ದಾಗ ಮಾರ್ಗ ಮಧ್ಯದಲ್ಲಿ ಕೊಳ್ಳೂರ(ಎಂ) ಗ್ರಾಮ ಸಮೀಪ ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.ಶಹಾಪುರ ಠಾಣೆ ಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿತ್ತು.ಮೃತ ಮಾನಪ್ಪ ಮೊದಲನೇ ಪತ್ನಿ ಹಾಗೂ ಮಕ್ಕಳನ್ನು ದೂರವಿಟ್ಟಿ ದ್ದರು ಎನ್ನಲಾಗಿದೆ.ಅವರ ವಿದ್ಯಾಭ್ಯಾಸಕ್ಕಾಗಲಿ ಯಾವುದೇ ಕಾರಣಕ್ಕೂ ಸಹಾಯ ಸಹಕಾರ ನೀಡಿಲ್ಲ.ಅಲ್ಲದೇ ಮೊದ ಲನೇ ಪತ್ನಿಯ ಮಗಳ ಮದುವೆಗೆ ಬಂಗಾರ ಕೊಡಿಸುವು ದಾಗಿ ಕೊನೆ ಗಳಿಗೆಯಲ್ಲಿ ಕೊಟ್ಟಿಲ್ಲ.ಹೀಗಾಗಿ ನನ್ನ ಅಕ್ಕನ ಮದುವೆಗೆ ಸಹಾಯವನ್ನು ಮಾಡದೆ ವಿದ್ಯಾಭ್ಯಾಸಕ್ಕೂ ಸಹಕಾರ ನೀಡದ, 25 ವರ್ಷದಿಂದ ತಾಯಿಯನ್ನು ನರಕಕ್ಕೆ ದೂಡಿದ ಕಾರಣಕ್ಕೆ ತಂದೆಯನ್ನು ಕೊಲೆ ಮಾಡಿರುವ ಕುರಿತು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪ್ರಕಟಣೆ ಯಲ್ಲಿ ಪೊಲೀಸ್‌ ಅಧೀಕ್ಷಕರು ತಿಳಿಸಿದ್ದಾರೆ.ಶಹಾಪುರ ಠಾಣೆ ಪಿಐ ಶ್ರೀನಿವಾಸ ಅಲ್ಲಾಪುರೆ,ಪಿಎಸ್‌ಐ ಶಾಮ ಸುಂದರ್‌ ಸೇರಿದಂತೆ ಸಿಬ್ಬಂದಿಗಳಾದ ನಾರಾಯಣ ಬಾಬು,ಸತೀಶಕುಮಾರ,ಭಾಗಣ್ಣ,ಸಿದ್ಧರಾಮಯ್ಯ, ಧರ್ಮ ರಾಜ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತಂಡದಲ್ಲಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk