ಹಿಟ್ ಆ್ಯಂಡ್ ರನ್ ಬ್ಯಾಂಕ್ ಕ್ಯಾಷೀಯರ್ ದುರ್ಮರಣ ಧಾರವಾಡದ ಶಿವಳ್ಳಿ ಬಳಿ ಘಟನೆ…..

Suddi Sante Desk
ಹಿಟ್ ಆ್ಯಂಡ್ ರನ್ ಬ್ಯಾಂಕ್ ಕ್ಯಾಷೀಯರ್ ದುರ್ಮರಣ ಧಾರವಾಡದ  ಶಿವಳ್ಳಿ ಬಳಿ ಘಟನೆ…..

ಹುಬ್ಬಳ್ಳಿ

ಹಿಟ್ ಆ್ಯಂಡ್ ರನ್ ಬ್ಯಾಂಕ್ ಕ್ಯಾಷೀಯರ್ ದುರ್ಮರಣ ವಾಗಿರುವ ಘಟನೆ ಧಾರವಾಡ ದ ಶಿವಳ್ಳಿ ಬಳಿ ನಡೆದಿದೆ.ಬ್ಯಾಂಕಿನ ಕೆಲಸ ಮುಗಿಸಿ ಕೊಂಡು ಹುಬ್ಬಳ್ಳಿಗೆ ಬೈಕಿನಲ್ಲಿ ಹೊರಟಿದ್ದ ಕ್ಯಾಷಿಯರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಕಾರು.ಹೀಗಾಗಿ ಸ್ಥಳದಲ್ಲಿಯೇ ಬೈಕ್ ಸವಾರ ಬಸವರಾಜ ಎಂಬವರು ಸಾವಿಗೀಡಾಗಿದ್ದಾರೆ‌.

ಧಾರವಾಡ ಜಿಲ್ಲೆಯ ಶಿವಳ್ಳಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.ಮೊರಬದ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಉದ್ಯೋ ಗಿಯಾಗಿದ್ದ ಬಸವರಾಜ.ಮೂಲತಃ ಮೊರಬದ ಗ್ರಾಮದ ನಿವಾಸಿಯಾಗಿರುವ ಬಸವರಾಜ ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿ‌ನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.