ಮಹಿಳಾ ಕಾನ್ಸ್‌ಟೇಬಲ್ ಮನೆಗೆ ಕನ್ನ – ಅಪಾರ ಪ್ರಮಾಣದ ಬಂಗಾರ ಬೆಳ್ಳಿ ನಗದು ಕಳ್ಳತನ…..

Suddi Sante Desk

ಬಸವಕಲ್ಯಾಣ –

ಪೊಲೀಸ್ ಕಾನ್ಸ್‌ಟೇಬಲ್ ರೊಬ್ಬರ ಮನೆಗೆ ಕನ್ನ ಹಾಕಿದ ಘಟನೆ ಬೀದರ್ ನ ಬಸವಕಲ್ಯಾಣ ದಲ್ಲಿ ನಡೆದಿದೆ. ನಗರದ ಗಣೇಶ ನಗರದಲ್ಲಿನ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸುಧಾರಾಣಿ ಅವರ ಮನೆ ಯಿಂದ ₹9 ಲಕ್ಷ ಮೌಲ್ಯದ 18 ತೊಲೆ ಚಿನ್ನಾಭರಣ ಹಾಗೂ ₹10 ಸಾವಿರ ನಗದು ಕಳವು ಮಾಡಲಾಗಿ ದೆ.

ಹುಲಸೂರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾರಾಣಿ ಅವರು ಕರ್ತವ್ಯಕ್ಕೆ ಹೋದಾಗ ಹಾಗೂ ಕುಟುಂಬದ ಸದಸ್ಯರು ಮನೆಯಲ್ಲಿ ಇಲ್ಲದಿದ್ದಾಗ ಶುಕ್ರವಾರ ಮಧ್ಯಾಹ್ನ ಕಳವು ಮಾಡಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚುವರಿ ಎಸ್‌.ಪಿ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳ್ಳರ ಪತ್ತೆಗೆ ತಂಡ ರಚಿಸಲಾ ಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.