ಬೆಂಗಳೂರು –
2017 ರ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ರಿಗೆ ಆಗಿರುವ ಅನ್ಯಾಯ ಆಗಿದ್ದು ಈ ಒಂದು ವಿಚಾರ ಕುರಿತಂತೆ ಕ ರಾ ಪ್ರಾ ಶಾ ಸಂಘವು ನಿಷ್ಠಾ 3.0 ತರಬೇತಿಯಲ್ಲಿ ಲಾಗಿನ್ ಆಗದೇ ತರಬೇತಿ ಯನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.ಇದು ಸರಿಯಾದ ವಿಚಾರ ಆದರೆ ಇದರ ಬದಲಿಗೆ ತರಗತಿಯ ಬಹಿಷ್ಕಾರಕ್ಕೆ ಕರೆ ನೀಡವಂತೆ ನಾಡಿನ ಶಿಕ್ಷಕರು ಕರೆ ನೀಡಿದ್ದಾರೆ.
ಈ ಕುರಿತಂತೆ ಸಂಘದ ಸರ್ವದ ಸದಸ್ಯರಿಗೆ ಒತ್ತಾಯವನ್ನು ಮಾಡಿದ್ದು ತರಬೇತಿ ಬಹಿಷ್ಕಾರಕ್ಕಿಂತ ಸುಮ್ಮನೆ ಕಣ್ಣೊರೆಸುವ ತಂತ್ರ ಬೇಡ ತರಬೇತಿ ಯನ್ನು ಮುಂದೂಡಬಹುದು ಜೊತೆಗೆ ಸಿ ಆಂಡ್ ಆರ್ ತಿದ್ದುಪಡಿಯನ್ನು ಕೂಡಾ ಮುಂದುಡಬಹುದು ಇದಕ್ಕಿಂತ ತರಗತಿಯ ಬಹಿಷ್ಕಾರಕ್ಕೆ ಕರೆ ನೀಡಿ ಎಂದು ಒತ್ತಾಯವನ್ನು ಮಾಡಿದ್ದಾರೆ
ಜೊತೆಗೆ ಇದಕ್ಕಿಂತ ಅದು ಅವಶ್ಯಕವಿದೆ ಹೀಗಾದರೆ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದು ಶಿಕ್ಷಕ ಸಂಘಟನೆಯ ನಾಯಕರಿಗೆ ನಾಡಿನ ಶಿಕ್ಷಕರು ಖಡಕ್ ಸೂಚನೆಯ ಸಂದೇಶವನ್ನು ರವಾನೆ ಮಾಡಿ ಒತ್ತಾಯ ಮಾಡಿದ್ದಾರೆ.