This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಕಾರು ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಸಾವು ASI ಸ್ಥಿತಿ ಗಂಭೀರ – ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ

WhatsApp Group Join Now
Telegram Group Join Now

ಚಾಮರಾಜನಗರ

ಕಾರು ಮರಕ್ಕೆ ಡಿಕ್ಕಿ ಯಾಗಿ ಪೊಲೀಸ್ ಕಾನ್ಸ್‌ಟೇಬಲ್ ರೊಬ್ಬರು ಸಾವಿಗೀಡಾಗಿ ಎಎಸ್ ಐ ರೊಬ್ಬರು ಗಂಭೀರ ವಾಗಿ ಗಾಯಗೊಂಡ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ. ಹೌದು ಸಂತೇಮರಹಳ್ಳಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಪ್ರಸಾದ್(34) ಅಪಘಾತದಲ್ಲಿ ಮೃತಪಟ್ಟ ವರಾಗಿದ್ದಾರೆ.ಕರ್ತವ್ಯ ನಿಮಿತ್ತ ಕೆಂಪನಪುರಕ್ಕೆ‌ ಎಎಸ್ಐ ರಾಜು ಮತ್ತು ಪ್ರಸಾದ್ ಬೈಕ್ ನಲ್ಲಿ ಹೋಗಿದ್ದರು.ಈ ವೇಳೆ ಕಾರು ಡಿಕ್ಕಿ ಹೊಡೆದಿದೆ.ಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ.ಪ್ರಸಾದ್ ಜತೆ ಬೈಕ್ ನಲ್ಲಿ ಹಿಂದೆ ಕುಳಿತ್ತಿದ್ದ ಎಎಸ್‌ಐ ರಾಜು ಸ್ಥಿತಿ ಗಂಭೀರವಾಗಿದ್ದು ಸಧ್ಯ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.ಕಾರಿನ ಮಾಲೀಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸಾದ್ ಒಂದು ತಿಂಗಳ ಮಗು ಇದೆ ಕಳೆದ ತಿಂಗಳು ಅಷ್ಟೇ ಹುಟ್ಟಿದ್ದು ಪ್ರಸಾದ್ ಸಾವಿಂದ ಕುಟುಂಬ ಕಂಗೆಟ್ಟಿದೆ. ಅವರ ವಯಸ್ಸಿನ್ನೂ 34 ವರ್ಷ.ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡಿಕೊಂಡೇ ಪಿಎಸ್ಐ ಆಗುವ ಗುರಿ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡುತ್ತಿದ್ದರು.

ಇವರ ಸಾಧನೆಗೆ ಸಾಥ್ ಕೊಡುವ ಮಡದಿ ಹಾಗೂ ಒಂದು ತಿಂಗಳ ಹಿಂದಷ್ಟೇ ಹುಟ್ಟಿದ ಗಂಡು ಮಗುವಿನೊಂದಿಗೆ ಸುಖಿ ಜೀವನ ನಡೆಸುತ್ತಿದ್ದರು.ಚಾಮರಾಜ ನಗರ ತಾಲೂಕಿನ ಇರಸವಾಡಿ ಯಲ್ಲಿ ಪತ್ನಿ-ಮಗು ಜತೆ ಪ್ರಸಾದ್ ವಾಸವಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk