ದಸರಾ ರಜೆ ವಿಸ್ತರಣೆಗೆ ಸಭೆಯಲ್ಲಿ ಸಿಕ್ಕಿತು ಪಾಸಿಟಿವ್ ಸ್ಪಂದನೆ ನಿರ್ಧಾರವಾಗಲಿದೆ ದಸರಾ ರಜೆಯ ವಿಸ್ತರಣೆ ಭವಿಷ್ಯ

Suddi Sante Desk
ದಸರಾ ರಜೆ ವಿಸ್ತರಣೆಗೆ ಸಭೆಯಲ್ಲಿ ಸಿಕ್ಕಿತು ಪಾಸಿಟಿವ್ ಸ್ಪಂದನೆ ನಿರ್ಧಾರವಾಗಲಿದೆ ದಸರಾ ರಜೆಯ ವಿಸ್ತರಣೆ ಭವಿಷ್ಯ

ಬೆಂಗಳೂರು

 

 

ಅಕ್ಟೋಬರ್ 31 ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ವಿಸ್ತರಣೆ ಮಾಡಿ ಎಂದು ರಾಜ್ಯಾಧ್ಯಂತ ಶಾಲಾ ಶಿಕ್ಷಕರು ಮಕ್ಕಳು ಪೋಷಕರು ಸೇರಿದಂತೆ ಹಲವರಿಂದ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ ಈ ಕುರಿತಂತೆ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲಾ ಶಿಕ್ಷಕರ ಸಂಘಟ ನೆಗಳು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವರು ಶಿಕ್ಷಣ ಸಚಿವರಿಗೆ ಮುಖ್ಯಮಂತ್ರಿಗೆ ಒತ್ತಾಯದೊಂದಿಗೆ ಒತ್ತಡವನ್ನು ಹಾಕುತ್ತಿ ದ್ದಾರೆ.

 

ಹೀಗಾಗಿ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದು ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತವಾದ ನಿರ್ಧಾರವನ್ನು ಕೈಗೊ ಳ್ಳುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದರು ಕೊಲ್ಲಾಪುರ ಪ್ರವಾಸ ಮುಗಿಸಿಕೊಂಡು ಬಂದ ನಂತರ ಸಭೆ ಮಾಡಿದರು ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ  ಸ್ಪಂದನೆ ಸಿಕ್ಕಿತು.

 

ಈಗಾಗಲೇ ಈ ಕುರಿತಂತೆ ಕೆಲವೊಂದಿಷ್ಟು ಹಿರಿಯ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಚರ್ಚೆಯನ್ನು ಮಾಡಿದ್ದು ಹೀಗಾಗಿ ಇಂದು ಮತ್ತೊಂದು ಹಂತದಲ್ಲಿ ಸಭೆಯನ್ನು ಮಾಡಿದ್ದು ಕಡತಕ್ಕೆ ಒಪ್ಪಿಗೆ ನೀಡಲು ಅನುಮತಿ ನೀಡಲಿ ದ್ದಾರೆ ಎಂಬ ಮಾತುಗಳು ಶಿಕ್ಷಣ ವಲಯದಲ್ಲಿ ವಿಧಾನ ಸೌಧದಲ್ಲಿ ಕೇಳಿ ಬರುತ್ತಿವೆ.ಶಾಲಾ ಮಕ್ಕಳಿಗೆ ಮಧ್ಯಂತರ ದಸರಾ ರಜೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಬೇಕು ಈ ಬಾರಿ ಮಧ್ಯಂತರ ರಜೆಯನ್ನು ಅ.3 ರಿಂದ ಅ.17ರ ವರೆಗೆ ನಿಗದಿಪಡಿಸಿದ್ದು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರಜೆಗಳನ್ನು ನೀಡಲಾಗಿದೆ.

 

ಪ್ರತಿವರ್ಷ ಈ ಮಧ್ಯಂತರ ರಜೆಯನ್ನು ಅ.3 ರಿಂದ ಅ.31ರ ವರೆಗೆ ನೀಡಲಾಗುತ್ತಿತ್ತು ಆದರೆ ಈ ರಜೆಯನ್ನು ಕಡಿತಗೊಳಿಸಿದ್ದು ಮಕ್ಕಳಲ್ಲಿ ತೀವ್ರ ನಿರಾಸೆಯನ್ನು ಉಂಟು ಮಾಡಿದೆ.ಶಾಲೆಗಳಿಗೆ ಮಧ್ಯಂತರ ದಸರಾ ರಜೆಯನ್ನು ಹಾಗೂ ಬೇಸಿಗೆ ರಜೆಯನ್ನು ನೀಡಲು ಅದರದೇ ಅದಂತಹ ವೈಜ್ಞಾನಿಕ ಕಾರಣಗಳಿವೆ. ಮಕ್ಕಳ ಶಿಕ್ಷಣ ಮತ್ತು ಭೌತಿಕ ಬೆಳವಣಿಗೆ ಹಿತದೃಷ್ಟಿಯಿಂದ ರಜೆ ದಿನ ಗಳನ್ನು ಹಾಗೂ ಒಟ್ಟು ಕಾರ್ಯನಿರ್ವಹಿಸಬೇ ಕಾದ ಶಾಲಾ ದಿನಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗುತ್ತದೆ.

 

ಈ ಎಲ್ಲ ಪ್ರಮುಖ ಅಂಶಗಳ ಜೊತೆಗೆ ಕೋವಿಡ್ ಕಾರಣಗಳಿಂದ ಈ ವರ್ಷ ಶಾಲೆಗಳಲ್ಲಿ ಮಕ್ಕಳ ಕಲಿಕಾ ಕಂದಕವನ್ನು ಕಡಿಮೆಗೊಳಿಸುವ ನಿಟ್ಟಿ ನಲ್ಲಿ ಬೇಸಿಗೆ ರಜೆಯನ್ನು ಮಟುಕುಗೊಳಿಸಿ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಜಾರಿ ಗೊಳಿಸಲಾಗಿದೆ.ಇನ್ನೂ ಈ ಬಾರಿ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಜಾರಿ ಮಾಡಿ ಈ ಬಾರಿ 15 ದಿನಗಳ ಮುಂಚಿತವಾಗಿ ಶಾಲೆಗಳನ್ನು ಪ್ರಾರಂಭಿಸಿದ್ದು ದಸರಾ ರಜೆಯನ್ನೂ ಕಡಿತಗೊ ಳಿಸಲಾಗಿದೆ.

 

ಇದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಆಗಲಿದೆ ಎಂದು ಅವರು ಆತಂಕ ವ್ಯಕ್ತವಾಗಿದ್ದು ಹೀಗಾಗಿ ಮುಖ್ಯಮಂತ್ರಿ ಅವರು ಈ ಕುರಿತಂತೆ ಸಭೆಯಲ್ಲಿ ಸ್ಪಂದಿಸಿದ್ದು ಅಧಿಕಾರಿ ಗಳಿಗೆ ಯಾವ ನಿರ್ಧಾರವನ್ನು ಕೈಗೊಳ್ಳುಲು ಸೂಚನೆ ನೀಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.