ವರ್ಗಾವಣೆಯಾಗದೆ ಬೇಸತ್ತ ಶಿಕ್ಷಕರಿಂದ ಬೊಬ್ಬೆ ಹೊಡೆಯುವ ಕಾರ್ಯಕ್ರಮ – ಅಧ್ಯಕ್ಷರ ಮನೆಯ ಮುಂದೆ ಬೊಬ್ಬೆ ಹೊಡೆಯಲು ಮುಂದಾದ ಶಿಕ್ಷಕರು…..

Suddi Sante Desk

ಬೆಂಗಳೂರು –

ಸರಿಯಾಗಿ ಸಮರ್ಪಕವಾಗಿ ವರ್ಗಾವಣೆಯಾಗದ ಕಾರಣಕ್ಕಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ. ಅದ್ಯೊಕೋ ಏನೋ ರಾಜ್ಯದಲ್ಲಿ ಏನೇಲ್ಲಾ ಆಗುತ್ತಿದ್ದರೂ ಕೂಡಾ ಶಿಕ್ಷಕರ ವರ್ಗಾವಣೆ ಮಾತ್ರ ಆಗುತ್ತಿಲ್ಲ ನಡೆಯುತ್ತಿಲ್ಲ ಇದರಿಂದಾಗಿ ಹತ್ತು ಹಲವಾರು ಕಷ್ಟಗಳ ನಡುವೆ ಕುಟುಂಬವನ್ನು ಬಿಟ್ಟು ದಿಕ್ಕಿಗೊಬ್ಬರು ಇರುತ್ತಿರುವ ನಾಡಿನ ಶಿಕ್ಷಕರು ಎನೇಲ್ಲಾವನ್ನು ತ್ಯಾಗ ಮಾಡಿ ಶಿಕ್ಷಕರಾಗಿ ಕೆಲಸವನ್ನು ಮಾಡುತ್ತಿದ್ದು ಸೇವೆಗೆ ಸೇರಿದಾಗಿದಿನಿಂದ ಹಿಡಿದು ಕೊಂಡು ಈವರೆಗೆ ಮಾತ್ರ ತಾವು ಕೇಳಿದ್ದಲ್ಲಿ ಅಂದುಕೊಂಡಲ್ಲಿ ವರ್ಗಾವಣೆ ಸಿಕ್ಕಿಲ್ಲ.

ಹೀಗಾಗಿ ಸಧ್ಯ ವರ್ಗಾವಣೆಯಲ್ಲಾದರೂ ಸಿಗುತ್ತದೆ ಎಂದುಕೊಂಡಿರುವ ಶಿಕ್ಷಕರಿಗೆ ಒಂದು ವರ್ಷದ ವರ್ಗಾವಣೆಯ ವೇಳಾಪಟ್ಟಿ ದೊಡ್ಡ ಪ್ರಮಾಣದಲ್ಲಿ ತಲೆನೋವಾಗಿದ್ದು ಹೀಗಾಗಿ ಬೇಸತ್ತ ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರು ಕೇಳಿ ಕೇಳಿ ನೋಡಿ ನೋಡಿ ಬೇಸತ್ತು ಅಂತಿಮವಾಗಿ ಈಗ ಶಿಕ್ಷಕರ ಧ್ವನಿಯಾಗಿರುವ ಅಧ್ಯಕ್ಷರ ಮನೆಯ ಮುಂದೆ ಬೊಬ್ಬೆ ಹೊಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ವರ್ಗಾವಣೆಯ ವಂಚಿತ ನಾಡಿನ ಶಿಕ್ಷಕರು ಈ ಒಂದು ಬೊಬ್ಬೆ ಹೊಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶೀಘ್ರದಲ್ಲೇ ಸಮಯ ಮತ್ತು ದಿನಾಂಕವನ್ನು ನಿಗದಿ ಮಾಡೊ ದಾಗಿ ಹೇಳಿದ್ದಾರೆ.

ಇನ್ನೂ ಹಂತ ಹಂತವಾಗಿ ನಾಡಿನ ಶಿಕ್ಷಕರು ಸಿಡಿದೆ ಳುವ ಲಕ್ಷಣಗಳು ಕಾಣುತ್ತಿದ್ದು ಶಿಕ್ಷಕರು ಬೀದಿಗಿಳಿ ಯುವ ಮುನ್ನವೇ ಸಂಘಟನೆಯ ನಾಯಕರು ಎಚ್ಚೇತ್ತುಕೊಂಡು ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಶಿಕ್ಷಕರ ವರ್ಗಾವಣೆಯ ಕುರಿತಂತೆ ಚಿಂತನೆ ಮಾಡೊದು ಅವಶ್ಯಕವಿದೆ ಇಲ್ಲವಾದರೆ ಆಕ್ರೋಶದ ಕಟ್ಟೆ ಹೊಡೆಯಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.