ಕೋವಿಡ್ ಕರ್ತವ್ಯದಲ್ಲಿ ಮೃತರಾದ ಶಿಕ್ಷಕರಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡಿ – ಶಿಕ್ಷಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ…..

Suddi Sante Desk

ಚಿಕ್ಕಬಳ್ಳಾಪುರ –

ಕೊರೋನೋ ವಾರಿಯರ್ಸ್ ಆಗಿ ಕರ್ತವ್ಯ ಮಾಡು ತ್ತಾ ಮರಣ ಹೊಂದಿರುವ ಶಿಕ್ಷಕರಿಗೆ ಸರ್ಕಾರದ ಆದೇಶದನ್ವಯ 30 ಲಕ್ಷ ವಿಮೆ ಮಂಜೂರು ಮಾಡ ಬೇಕೆಂದು ಒತ್ತಾಯಿಸಿ ಶಿಕ್ಷಕರು ಮನವಿ ನೀಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಚಿಕ್ಕಬಳ್ಳಾಪೂರ ಜಿಲ್ಲಾ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಅಮರೇಶ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಕೋವಿಡ್ ಕರ್ತವ್ಯವನ್ನು ಶಿಕ್ಷಕರು ಯಶಸ್ವಿಯಾಗಿ ಮಾಡುತ್ತಿದ್ದಾರೆ‌.ಈ ಒಂದು ಸಂದರ್ಭದಲ್ಲಿ ಮೃತರಾ ದ ಶಿಕ್ಷಕರಿಗೆ ರಾಜ್ಯ ಸರ್ಕಾರದ ಆದೇಶ ದಂತೆ 30 ಲಕ್ಷ ಪರಿಹಾರವನ್ನು ತಾವುಗಳು ಮಂಜೂರು ಮಾಡ ಬೇಕೆಂದು ಈ ಮೂಲಕ ಶಿಕ್ಷಕರ ಧ್ವನಿಯಾಗಿ ಇವರು ಒತ್ತಾಯವನ್ನು ಮಾಡಿದರು.

ಜಿಲ್ಲಾಧ್ಯಕ್ಷರಾದ ಎ. ನಾರಾಯಣಸ್ವಾಮಿ ನೇತ್ರತ್ವ ದಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ಅಶೋಕ್ ಕುಮಾರ್ ರವರು,ಖಜಾಂಚಿ ಪಿಳ್ಳಣ್ಣರವರು,ಜಿಲ್ಲಾ ಉಪಾಧ್ಯಕ್ಷರಾದ ಡಿ. ಲಿಂಗಪ್ಪರ ವರು, ಜಿಲ್ಲಾ ಸಹಕಾರ್ಯದರ್ಶಿ ಬಿ. ಸಂಜೀವ ರಾಯಪ್ಪ ರವರು ಸೇರಿದಂತೆ ಹಲವರು ಪಾಲ್ಗೊಂಡು ಮನವಿ ಸಲ್ಲಿಸಿ ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.