ಹೆತ್ತ ಮಗನೊಂದಿಗೆ ನದಿಗೆ ಹಾರಿದ ಶಿಕ್ಷಕಿ – ಆತ್ಮಹತ್ಯೆಗೆ ಇನ್ನೂ ಸಿಗದ ಕಾರಣ ಪೊಲೀಸರಿಂದ ಹುಡುಕಾಟ…..

Suddi Sante Desk

ಶಹಬಾದ್ –

ಶಿಕ್ಷಕಿಯೊಬ್ಬರು ಹೆತ್ತ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಕಲಬುರ್ಗಿ ಯಲ್ಲಿ ನಡೆದಿದೆ.ಸಂಜೆ ಶಿಕ್ಷಕಿಯೊಬ್ಬರು ಅಷ್ಟೇ ನದಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಕುರಿತಂತೆ ಮಾಹಿತಿಲಭ್ಯವಾಗಿತ್ತು ಇದರ ಬೆನ್ನಲ್ಲೆ ಈಗ ಈ ಒಂದು ಘಟನೆ ಬೆಳವಣಿಗೆಯಾ ಗಿದ್ದು ಶಿಕ್ಷಕಿ ತಮ್ಮ ಹೆತ್ತ ಮಗನೊಂದಿಗೆ ನದಿಗೆ ಹಾರಿದ್ದಾ ರಂತೆ.ಶಹಬಾದ್ ತಾಲ್ಲೂಕಿನ ಶಂಕರವಾಡಿ ಗ್ರಾಮದ ಕಾಗಿನಾ ನದಿಯಲ್ಲಿ ಈ ಒಂದು ಘಟನೆ ನಡೆದಿದೆ. ಕಡೇಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಶಾಂತಲಾ ಮೈಲಾರಿ ಅವರೇ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯಾಗಿದ್ದು ಎರಡು ವರ್ಷದ ಮಗನೊಂದಿಗೆ ನದಿಗೆ ಹಾರಿದ್ದಾರೆ ಶಿಕ್ಷಕಿ ಶ್ರೀಮತಿ ಶಾಂತಾ ಮೈಲಾರಿ ಅವರು.ಭಂಕೂರು ನಿವಾಸಿಯಾಗಿದ್ದಾರೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕುರಿತು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇನ್ನೂ ಇದರೊಂದಿಗೆ ಈ ಒಂದು ಶಿಕ್ಷಕಿ ಯೊಬ್ಬರ ಸಾವಿಗೆ ಶಹಬಾದ್ ತಾಲ್ಲೂಕಿನ ಶಿಕ್ಷಕ ಸಮುದಾಯ ದಿಗ್ಬ್ರಮೆ ವ್ಯಕ್ತಪಡಿಸಿದ್ದು.ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕಾದ ಶಿಕ್ಷಕರೇ ತಮ್ಮ ಅಮೂಲ್ಯವಾದ ಜೀವವನ್ನು ಬಲಿ ಕೊಟ್ಟರೆ ಅದರಲ್ಲೂ ವಿದ್ಯಾವಂತರಾದವರಾದ ಇವರು ಮಗನೊಂದಿಗೆ ಹೀಗೆ ಮಾಡಿದ್ದ ದುರಂತವಾಗಿದೆ. ಜೀವನ ದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಶಾಂತ ರೀತಿಯಿಂದ ಆಲೋಚಿಸಿದಾಗ ಪರಿಹಾರ ಸಿಗುತ್ತದೆ ಹೀಗೆ ಮಾಡಿದ್ದು ದುರಂತವಾಗಿದ್ದು ಎಂದು ನಾಡಿನ ಶಿಕ್ಷಕರು ಭಾವಪೂರ್ಣ ನಮನ ದೊಂದಿಗೆ ಸಂತಾಪವನ್ನು ಸೂಚಿಸಿದ್ದಾರೆ. ನದಿ ಯಲ್ಲಿ ಸಧ್ಯ ಹುಡುಕಾಟ ನಡೆಯುತ್ತಿದ್ದು ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ವೊಂದನ್ನು ಹಾಕಿದ್ದನ್ನು ಪೊಲೀಸರಿಗೆ ಸಿಕ್ಕಿದ್ದು ಸಧ್ಯ ಶಿಕ್ಷಕಿಯವರ ಆತ್ಮಹತ್ಯೆ ಕುರಿತಂತೆ ಕಾರಣವನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.