ಆತ್ಮಹತ್ಯೆ ಗೆ ಶರಣಾದ ಶಿಕ್ಷಕ – ಆತ್ಮಹತ್ಯೆ ಮಾಡಿಕೊಂಡ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

Suddi Sante Desk
ಆತ್ಮಹತ್ಯೆ ಗೆ ಶರಣಾದ ಶಿಕ್ಷಕ – ಆತ್ಮಹತ್ಯೆ ಮಾಡಿಕೊಂಡ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

ರೋಣ

ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ರೋಣ ದಲ್ಲಿ ನಡೆದಿದೆ ಪಟ್ಟಣದ ಸರಾಫ್ ಬಜಾರದ ನಿವಾಸಿಯಾಗಿದ್ದ ಗಜೇಂದ್ರಗಡ-ರೋಣ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ, ಹಿರೇಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಈಶ್ವರಪ್ಪ ಅಂದಾನಪ್ಪ ರೇವಡಿ (57)

ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಮ್ಮ ತಂದೆಗೆ ಹೃದಯ ಕಾಯಿಲೆ ಇತ್ತು. ಅದು ಗುಣಮುಖವಾ ಗುವುದಿಲ್ಲ ಎಂದು ಮಾನಸಿಕವಾಗಿ ನೊಂದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರಿ ನಿವೇದಿತಾ ಈಶ್ವರಪ್ಪ ರೇವಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಟ್ಟಣದ ಹೊರ ವಲಯದಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು

ಸುದ್ದಿ ಸಂತೆ ನ್ಯೂಸ್ ರೋಣ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.