ಭೀಕರ ಅಪಘಾತ ಎಂಟು ಜನರ ಸಾವು – ಭೀಕರ ಅಪಘಾತ ಮಾಸುವ ಮುನ್ನವೆ ಬೆಳಗಾವಿಯಲ್ಲಿ ಮತ್ತೆರೆಡು ಭೀಕರ ಅಪಘಾತಗಳು…..

Suddi Sante Desk
ಭೀಕರ ಅಪಘಾತ ಎಂಟು ಜನರ ಸಾವು – ಭೀಕರ ಅಪಘಾತ ಮಾಸುವ ಮುನ್ನವೆ ಬೆಳಗಾವಿಯಲ್ಲಿ ಮತ್ತೆರೆಡು ಭೀಕರ ಅಪಘಾತಗಳು…..

ಬೆಳಗಾವಿ

ಭೀಕರ ಅಪಘಾತ ಎಂಟು ಜನರ ಸಾವು  ಭೀಕರ ಅಪಘಾತ ಮಾಸುವ ಮುನ್ನವೆ ಬೆಳಗಾವಿಯಲ್ಲಿ ಮತ್ತೆರೆಡು ಭೀಕರ ಅಪಘಾತಗಳು ಹೌದು

ಭೀಕರ ಅಪಘಾತ ಸಂಭವಿಸಿ ಆರು ಜನ ಸಾವಿ ಗೀಡಾಗಿದ್ದ ಬೆಳಗಾವಿಯಲ್ಲಿ ಮತ್ತೆರೆಡು ಭೀಕರ ಅಪಘಾತಗಳು ಸಂಭವಿಸಿದ್ದು ಎರಡು ಅಪಘಾತ ಪ್ರಕರಣಗಳಲ್ಲಿ ಎಂಟು ಜನರು ಸಾವಿಗೀಡಾಗಿದ್ದಾರೆ.ಹೌದು ಎರಡು ಪ್ರತ್ಯೇಕ ವಾದ ಭೀಕರ ಅಪಘಾತಗಳಾಗಿದ್ದು ಒಂದು ಪ್ರಕರಣದಲ್ಲಿ ಮೂವರು ಇನ್ನೊಂಂದು ಪ್ರಕರಣ ದಲ್ಲಿ ಐವರು ಸಾವಿಗೀಡಾಗಿದ್ದಾರೆ.ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಬಳಿ ಒಂದು ಅಪಘಾತದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೂ ಈ ಒಂದು ಘಟನೆ ಬೆನ್ನಲ್ಲೇ ಇತ್ತ ರಾಯಬಾಗ ತಾಲೂಕಿನ ಮುಗಳಖೋಡ ಬಳಿಯ ಜತ್ತ-ಜಾಂಬೋಟಿ ರಸ್ತೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.ರಾಯಬಾಗ ತಾಲೂಕಿನ ಮುಗಳ ಖೋಡ ಕಾಲುವೆ ಬಳಿ ಜತ್ತ-ಜಾಂಬೋಟಿ ರಸ್ತೆಯಲ್ಲಿ ಸಂಭವಿಸಿದೆ.

ಗುರ್ಲಾಪುರದ ಮಲ್ಲಿಕಾರ್ಜುನ ಮರಾಠೆ (16)ಲಕ್ಷ್ಮೀ ಮರಾಠೆ(19 )ಆಕಾಶ್ ಮರಾಠೆ (19)ಬೈಕ್ ಸವಾರರಾದ ನಿಪನಾಳ ಗ್ರಾಮದ ಶ್ರೀಕಾಂತ್ ಪಡತರಿ(22) ಹಾಗೂ ಮುಗಳ ಖೋಡ ನಿವಾಸಿ ನಾಗಪ್ಪ ಯಡವನ್ನವರ್(48) ಮೃತರಾದವರಾಗಿದ್ದಾರೆ. ಬೈಕ್‌ಗೆ ಡಿಕ್ಕಿಯಾದ ಬಳಿಕ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾ ಗಿದೆ.ಈ ಕುರಿತು ಹಾರೊಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.