ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಬಹುಮುಖ್ಯ ಸಂದೇಶದ ಮಾಹಿತಿ ರಾಜ್ಯದಲ್ಲಿ ಹೊಸದಾಗಿ ಸರ್ಕಾರಿ ನೌಕರರಿಗೆ ಬರಲಿದೆ ಹೊಸ ನಿಯಮಾವಳಿ

Suddi Sante Desk
ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಬಹುಮುಖ್ಯ ಸಂದೇಶದ ಮಾಹಿತಿ ರಾಜ್ಯದಲ್ಲಿ ಹೊಸದಾಗಿ ಸರ್ಕಾರಿ ನೌಕರರಿಗೆ ಬರಲಿದೆ ಹೊಸ ನಿಯಮಾವಳಿ

ಬೆಂಗಳೂರು

ರಾಜ್ಯದಲ್ಲಿ ಇತ್ತೀಚಿಗೆ ದಿನದಿಂದ ದಿನಕ್ಕೆ ಕೋಮ ಭಾವನ  ಕೆರಳಿಸುವ ಕೆಲವೊಂದಿಷ್ಟು ಸಂಗತಿಗಳು ಘಟನೆ ಗಳು ನಡೆಯುತ್ತಿದ್ದು ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗಾಗಿ ಹೊಸದೊಂದು ನಿಯ ಮಾವಳಿ ಯನ್ನು ಜಾರಿಗೆ ತರಲು ಮುಂದಾಗಿದೆ

ಹೌದು ಸಮಸ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ನಿಯಮಾವಳಿ ಕುರಿತಾದ ಕರಡನ್ನು ಜಾರಿಗೆ ತರಲು ಮುಂದಾಗಿದ್ದು ನಾಗರಿಕ ಸೇವಾ ನಿಯಮ ಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಸರ್ಕಾರಿ ನೌಕರರು ಕೋಮು ಸಂಘಟನೆ ಸದಸ್ಯ ರಾಗುವಂತಿಲ್ಲ.ಈ ಬಗ್ಗೆ ನಾಗರಿಕ ಸೇವಾ ನೌಕರರ ನಿಯಮಗಳಿಗೆ ತಿದ್ದುಪಡಿ ತರಲಿದ್ದು  ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ ನೌಕರರು ಸಮುದಾಯದಲ್ಲಿ ದ್ವೇಷ ಹರಡುವ ಯಾವುದೇ ಕೋಮು ಸಂಘಟನೆಗಳ ಸದಸ್ಯರಾಗುವಂತಿಲ್ಲ ನೌಕರರ ನಡತೆಯ ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು ದ್ವೇಷ ಅಸೂಯೆ ಭಾವನೆಗಳನ್ನು ಕೆರಳಿಸುವ ಸಂಘಟನೆಗಳಿಂದ ನೌಕರರನ್ನು ದೂರವಿಡಲು ಸರ್ಕಾರ ಕ್ರಮ ಕೈಗೊಂಡಿದೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೌಕರರ ನಡತೆಯ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಟ್ಟಿದ್ದು ಇದಕ್ಕೆ ಒಪ್ಪಿಗೆ ಸಿಗಲಿದೆ.ಇದರೊಂದಿಗೆ ಸರ್ಕಾರಿ ನೌಕರರಿಗೆ ಕಟ್ಟಪ್ಪಣೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.