ಸಹೋದರಿಯ ಸಂಸಾರ ಸರಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

Suddi Sante Desk

ಹೊಸಪೇಟೆ –

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನನ್ನೇ ಚೂರಿಯಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರಲ್ಲಿ ಈ ಒಂದು ಕೊಲೆ ನಡೆದಿದೆ.

22 ವರುಷದ ಆಕಾಶ ಎಂಬುವರೇ ಕೊಲೆಯಾದ ಯುವಕನಾಗಿದ್ದಾನೆ. ಮಾವ ಧರ್ಮನಾಯ್ಕ್ ಎಂಬುವರೇ ಚೂರಿಯಿಂದ ಚುಚ್ಚಿ ಕೊಲಗೈದಿರುವುದಾಗಿ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮೃತ ಯುವಕನ ಸಂಭಂದಿಕರು. ಘಟನೆಯಲ್ಲಿ ಹೆಂಡತಿ ಡಿ.ಸುದಾಬಾಯಿ ಮತ್ತು ಆಕೆಯ ತಾಯಿ ಕಮಲಬಾಯಿಗೆ ಗಾಯಗಳಾಗಿವೆ.

ಹೂವಿನ ಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಧರ್ಮರಾಜ್ ಮತ್ತು ಇತರೆ ಎಂಟು ಜನರ ವಿರುದ್ದ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಕೊಲೆ ಆರೋಪಿಸಿ ದೂರು ದಾಖಲು ಮಾಡಿರುವ ಡಿ.ಸುದಾ.ಕಳೆದ 2015ರಲ್ಲಿ ಡಿ.ಸುದಾ ಮತ್ತು ಕಾಲ್ವಿ ತಾಂಡದ ಧರ್ಮನಾಯ್ಕ್ ಪ್ರೀತಿಸಿ ಮದುವೆ ಆಗಿದ್ದರು.

ಇತ್ತೀಚೆಗೆ ಗಂಡ ಹೆಂಡತಿ‌ ನಡುವೆ ವಿರಸ ಉಂಟಾಗಿ ತಂದೆಯ ಮನೆಯಲ್ಲಿ ವಾಸವಾಗಿದ್ದ ಡಿ.ಸುದಾ.ಹಂಪಸಾಗರ ಹೆಂಡತಿ ಮನೆಗೆ ನಿನ್ನೆ ಬಂದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿ ಅಳಿಯನ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ. ಅಕ್ಕನ ಸಂಸಾರ ಸರಿಪಡಿಸಲು ಹೋದ ತಮ್ಮನೇ ಸ್ಮಶಾನ ಸೇರಿದ ದಾರುಣ ಘಟನೆ ಇದು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.