ACB ಬಲೆಗೆ ಬಿದ್ದ ತಾಲ್ಲೂಕು ಪಂಚಾಯತ ಅಧಿಕಾರಿ – 1500 ರೂಪಾಯಿ ತೆಗೆದುಕೊಳ್ಳುವಾಗ ಬಲೆಗೆ ಬಿದ್ದ ಅಧಿಕಾರಿ…..

Suddi Sante Desk

ಕೋಲಾರ –

ಜಮೀನಿನ ಹಕ್ಕು ಪತ್ರವನ್ನು ನೀಡಲು ಹಣದ ಬೇಡಿಯನ್ನಿಟ್ಟಿದ್ದ ತಾಲ್ಲೂಕು ಪಂಚಾಯತ ಅಧಿಕಾರಿ ಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಕೋಲಾರ ದಲ್ಲಿ ನಡೆದಿದೆ. ಹೌದು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಪಂಚಾಯಿತಿ ಕಚೇರಿ ಅಧಿಕಾರಿಯೊ ಬ್ಬರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹಕ್ಕುಪತ್ರ ನಕಲು ಪ್ರತಿ ನೀಡಲು ಜಗನ್ನಾಥ್ ಎಂಬು ವರಿಂದ 1,500 ಲಂಚ ಪಡೆಯುತ್ತಿದ್ದರು. ಈ ವೇಳೆ ಎಸಿಬಿ ಸರ್ಕಲ್‌ ಇನ್ಸ್ಪೆಕ್ಟರ್ ಫಾರೂಖ್‌ ಪಾಷ್‌ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ. ಅಧಿಕಾರಿ ಯನ್ನು ವಶಕ್ಕೆ ಪಡೆಯಲಾಗಿದೆ.ಕಚೇರಿ ಬಳಿಯಿ ರುವ ನಂದಿನಿ ಪಾರ್ಲರ್‌ನಲ್ಲಿ ಲಂಚ ಪಡೆಯುವಾಗ ಪ್ರಥಮ ದರ್ಜೆ ಅಧಿಕಾರಿ ಬಸವರಾಜು ಅವರು ಸಿಕ್ಕಿಬಿದ್ದಿದ್ದು ಸಧ್ಯ ಇವರನ್ನು ವಶಕ್ಕೆ ತೆಗೆದುಕೊಂಡಿ ರುವ ಎಸಿಬಿ ಅಧಿಕಾರಿ ಗಳು ವಿಚಾರಣೆಯನ್ನು ಮಾಡತಾ ಇದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.