ACB ಬಲೆಗೆ ಪ್ರಥಮ ದರ್ಜೆ ಸಹಾಯಕ – ಪರಿಹಾರದ ಹಣ ಜಮಾ ಮಾಡಲು ಲಂಚ ಕ್ಕೆ ಬೇಡಿಕೆ

Suddi Sante Desk

ಬಾಗಲಕೋಟೆ –

ಲಂಚ ಸ್ವೀಕರಿಸುತ್ತಿದ್ದ ವೇಳೆ ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದ ಘಟನೆ ಬಾಗಲ ಕೋಟೆ ಯಲ್ಲಿ ನಡೆದಿದೆ.ನವನಗರದ ಕೃಷ್ಣಾ ಮೇಲ ದಂಡೆಯ ಯೋಜನೆಯ ಭೂಸ್ವಾಧೀನಾಧಿಕಾರಿಗಳ ಕಚೇರಿಯ ಪ್ರಭಾರ ಪ್ರಥಮ ದರ್ಜೆ ಸಹಾಯಕ ಎಮ್.ಎಸ್.ಆಕಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಯಾಗಿದ್ದಾರೆ‌.ಯೋಜನೆಯ ಪರಿಹಾರದ ಹಣವನ್ನ ಜಂಟಿ ಖಾತೆಗೆ ಜಮೆ ಮಾಡಲು ಎಂಟು ಸಾವಿರ ರೂಪಾಯಿಗಳ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆದಿದೆ.ಬಾಗಲಕೋಟೆ ತಾಲೂಕಿನ ಶೀಗಿ ಕೇರಿ ಗ್ರಾಮದ ಪರಸಪ್ಪ ಯಲ್ಲಪ್ಪ ಕಗಲಗೊಂಬ ಎನ್ನುವವರು ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ಉತ್ತರ ವಲಯದ ಪೊಲೀಸ್ ಆಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ನಡೆದ ಈ ಒಂದು ದಾಳಿ ಯಲ್ಲಿ ಸುರೇಶರೆಡ್ಡಿ ಎಂ.ಎಸ್. DSP, ವಿಜಯ ಮಹಾಂತೇಶ ಮಠಟಪತಿ, ಸಮೀರ ಮುಲ್ಲಾ ಇನ್ಸ್ಪೆಕ್ಟರ್ ,ಹಾಗೂ ಸಿಬ್ಬಂದಿ ಗಳಾದ ಹೂಗಾರ,ಪೂಜಾರಿ,ಮುಲ್ಲಾ,ಕಾಕಂಡಕಿ,ಪಾಟೀಲ್,ಚುರ್ಜಾಳ,ರಾಠೋಡ ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.