ACB ಬಲೆಗೆ ಬಿದ್ದ ಜಲ ಮಂಡಳಿ ಯ ಅಧಿಕಾರಿ ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಟ್ರ್ಯಾಪ್…..

Suddi Sante Desk

ವಿಜಯಪುರ –

ಜಲ ಮಂಡಳಿಗೆ ಕಾರ್ಮಿಕರನ್ನು ಪೊರೈಕೆ ಮಾಡುವ ವಿಚಾರ ಕುರಿತಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಲ ಮಂಡಳಿ ಯ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.ಹೌದು ಇಲಾಖೆಗೆ ಕಾರ್ಮಿಕರ ನ್ನು ನೀಡುವ ಕುರಿತಂತೆ ಗುತ್ತಿಗೆದಾರನಿಗೆ ಎಇಇ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಒಂದು ವಿಚಾರ ಕುರಿತಂತೆ ಹಣಕ್ಕೆ ಬೇಡಿಕೆಯನ್ನಿಟ್ಟಿದ್ದು ಎಸಿಬಿಗೆ ದೂರನ್ನು ನೀಡಲಾಗಿ ತ್ತು ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿಟ್ರ್ಯಾಪ್ ಮಾಡಲಾಗಿದೆ.

ಇದರೊಂದಿಗೆ ಎಸಿಬಿ ಬಲೆಗೆ ಬಿದ್ದಿದ್ದಾರೆ ವಾಟರ್ ಬೋರ್ಡ್ ಎಇಇ. ಕಾರ್ಮಿಕರನ್ನು ಪೂರೈಕೆ ಮಾಡುವ ಗುತ್ತಿಗೆದಾರನಿಂದ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ಟ್ಯ್ರಾಪ್ ಮಾಡಿದ್ದು ಬಾಬು ನದಾಫ್ ಅವರೇ ಬಲೆಗೆ ಬಿದ್ದವರಾಗಿದ್ದಾರೆ.ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಂ 2 ರ ಎಇಇ‌ ಬಾಬು‌ ನದಾಫ್.ಕಾರ್ಮಿಕರ ಗುತ್ತಿಗೆದಾರ ಸಗರ ಎಂಬುವವರಿಂದ 50 ಸಾವಿರ ರೂಪಾಯಿ ಲಂಚ ಸ್ವೀಕರಿ ಸೋ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು.

ಲಂಚಕ್ಕಾಗಿ ಗುತ್ತಿಗೆದಾರ ಸಗರ ಎಂಬುವವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಎಇಇ ಬಾಬು ನದಾಫ್.ಈ ಕುರಿತು ಎಸಿಬಿಗೆ ದೂರು ನೀಡಿದ್ದರು ಗುತ್ತಿಗೆದಾರ.ಗುತ್ತಿಗೆದಾರ ಸಗರ ಬಳಿ ಹಣ ಸ್ವೀಕರಿಸೋ ವೇಳೆ ದಾಳಿ ನಡೆಸಿದ್ದಾರೆ ಎಸಿಬಿ ಅಧಿಕಾರಿಗಳು ಎಇಇ‌ ಬಾಬು ನದಾಫ್ ಎಸಿಬಿ ವಶಕ್ಕೆ ತಗೆದುಕೊಂಡಿರುವ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಇನ್ಸ್ಪೆಕ್ಟರ್ ಗಳಾದ ಪರಮೇಶ್ವರ ಕವಟಗಿಮಠ ಹಾಗೂ ಚಂದ್ರಕಲಾ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು ಸಧ್ಯ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.