ಕಾನೂನು ವಿಶ್ವವಿದ್ಯಾಲಯದ ಸೆಪ್ಟೆಂಬರ್ 29 ರ ಪರೀಕ್ಷೆ ಮುಂದೂಡಿಕೆ – ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮೌಲ್ಯಮಾಪನ ಕುಲಸಚಿವರ ಆದೇಶ…..

Suddi Sante Desk
ಕಾನೂನು ವಿಶ್ವವಿದ್ಯಾಲಯದ ಸೆಪ್ಟೆಂಬರ್ 29 ರ ಪರೀಕ್ಷೆ ಮುಂದೂಡಿಕೆ – ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮೌಲ್ಯಮಾಪನ ಕುಲಸಚಿವರ ಆದೇಶ…..

ಹುಬ್ಬಳ್ಳಿ

ಕಾನೂನು ವಿಶ್ವವಿದ್ಯಾಲಯದ ಸೆಪ್ಟೆಂಬರ್ 29 ರ ಪರೀಕ್ಷೆ ಮುಂದೂಡಿಕೆ – ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮೌಲ್ಯಮಾಪನ ಕುಲಸಚಿವರ ಆದೇಶ.ಹೌದು ಕಾವೇರಿ ನದಿ ನೀರು ಹಂಚಿಕೆ ವಿಚಾರ ಕುರಿತಂತೆ ಸೆಪ್ಟೆಂಬರ್ 29 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಅಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಕಾನೂನು ವಿಶ್ವವಿದ್ಯಾಲಯವು ಪರೀಕ್ಷೆಯನ್ನು ಮುಂದೂಡಿದೆ.

ಹೌದು ಸೆಪ್ಟೆಂಬರ್ 29 ರ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಅಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಅಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನುಅಕ್ಟೋಬರ್ 1 ಕ್ಕೆ ಮುಂದೂಡಿ ಆದೇಶವನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಈ ಒಂದು ಆದೇಶವನ್ನು ಮಾಡಿದ್ದಾರೆ.

ಕಾವೇರಿ ನೀರಿಗಾಗಿ ಈ ಒಂದು ಕರ್ನಾಟಕ ಬಂದ್ ಗೆ ಕರೆಯನ್ನು ನೀಡಲಾಗಿದೆ.ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಅಂದು ಜನಜೀವನವು ಅಸ್ತವ್ಯಸ್ತವಾಗೋ ಸಾಧ್ಯತೆ ಇದೆ ಹೀಗಾಗಿ ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲತೆ ತಪ್ಪಿಸಲು ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

ಸೆ. 29 ರ ಪರೀಕ್ಷೆಯನ್ನು ಅಕ್ಟೋಬರ್ 01 ರ ರವಿವಾರ ನಡೆಸಲು ತೀರ್ಮಾನವನ್ನು ತಗೆದು ಕೊಳ್ಳಲಾಗಿದೆ.ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಿನ್ನೆಯ ಪರೀಕ್ಷೆಯನ್ನು ಅಕ್ಟೋಬರ್ 08 ಕ್ಕೆ ಮುಂದೂಡಿದ್ದ ವಿ.ವಿ.ಇದೀಗ ಮತ್ತೊಂದು ಪರೀಕ್ಷೆಯನ್ನು ಕೂಡಾ ಮುಂದೂಡಿಕೆ ಮಾಡಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.