ನಾಲ್ಕು ಏಕರೆ ಆಸ್ತಿಗಾಗಿ ಮಾವನನ್ನೇ ಕೊಲೆ ಮಾಡಿ ಅಳಿಯಂದಿರರು – ಕಾದು ಕುಳಿತು ಊರ ಬಸ್ಟ್ಯಾಂಡ್ ನಲ್ಲಿ ಕೊಚ್ಚಿ ಕೊಲೆ – ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಶ್ರೀಶೈಲ ಕೌಜಲಗಿ ಟೀಮ್…..

Suddi Sante Desk
ನಾಲ್ಕು ಏಕರೆ ಆಸ್ತಿಗಾಗಿ ಮಾವನನ್ನೇ ಕೊಲೆ ಮಾಡಿ ಅಳಿಯಂದಿರರು – ಕಾದು ಕುಳಿತು ಊರ ಬಸ್ಟ್ಯಾಂಡ್ ನಲ್ಲಿ ಕೊಚ್ಚಿ ಕೊಲೆ – ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಶ್ರೀಶೈಲ ಕೌಜಲಗಿ ಟೀಮ್…..

ಕಲಘಟಗಿ

ಗ್ರಾಮ ಪಂಚಾಯತಿ ಸದಸ್ಯರೊಬ್ಬರನ್ನು ಭೀಕರ ವಾಗಿ ಹತ್ಯೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಯಲ್ಲಿ ನಡೆದಿದೆ.ಹೌದು ಜನನೀಬೀಡ ಪ್ರದೇಶದಲ್ಲೇ ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾರೆ ಆರೋಪಿಗಳು.

:ಜನನೀಬೀಡ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯನನ್ನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬಗಡ ಗೇರಿ ಗ್ರಾಮದಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಭೋಗೇನಾಗರಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ, ಬಗಡಗೇರಿ ಗ್ರಾಮದ ನಿವಾಸಿ ನಿಂಗಪ್ಪ ಬಸಪ್ಪ ದಾಸಪ್ಪನವರ (35) ಎಂದು ಗುರುತಿಸ ಲಾಗಿದೆ.

ಆಸ್ತಿ ವಿಚಾರವಾಗಿ ಸಂಬಂಧಿಕರೇ ನಿಂಗಪ್ಪನನ್ನು ಅವರ ಅತ್ತೆ ಯ ಮಕ್ಕಳು ಹತ್ಯೆ ಮಾಡಿದ್ದಾರೆ ಗ್ರಾಮದ ಬಸ್ ನಿಲ್ದಾಣ ಹತ್ತಿರ ನಿಂಗಪ್ಪ ಬಂದಾಗ ದುಷ್ಕರ್ಮಿಗಳು ಆತನ ಮೇಲೆ ಏಕಾಏಕಿ ದಾಳಿ ನಡೆಸಿದ್ದರಲ್ಲದೇ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿ ದ್ದಾರೆ ಗಂಭೀರ ಗಾಯಗೊಂಡಿದ್ದ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ನಿಂಗಪ್ಪನಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ಥಳಕ್ಕೆ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದ ಪೊಲೀಸರ ತಂಡ ಪರಿಶೀಲಿಸಿದರು. ಈ ಕುರಿತು ಕಲಘಟಗಿ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.