ಬೆಂಗಳೂರು –
ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಈಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಹಾಲಿ ಸಚಿವರ ಖಾತೆಗಳ ಅದಲು-ಬದಲು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯ ಫೈನಲ್ ಪಟ್ಟಿಗೆ ರಾಜ್ಯ ಪಾಲರು ಅಂಕಿತ ಹಾಕಿದ್ದಾರೆ.ಸಚಿವರ ಪಟ್ಟಿಯನ್ನು ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯದ ನೂತನ ಸಚಿವರ ಖಾತೆಗಳು, ಹಾಲಿ ಸಚಿವರ ಖಾತೆಗಳ ಅದಲು – ಬದಲು ಸಂಪೂರ್ಣ ಪಟ್ಟಿ ಇಂತಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ – ಡಿಪಿಎಆರ್, ಕ್ಯಾಬಿನೆಟ್ ಅಫೈರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಎನರ್ಜಿ, ಗುಪ್ತಚರ, ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಅಂಡ್ ಸ್ಟಾಟಿಸ್ಟಿಕ್ಸ್, ಇನ್ಫಾಸ್ಟ್ರಕ್ಚರ್ ಡೆವೆಲ್ಮೆಂಟ್
ಉಮೇಶ್ ಕತ್ತಿ – ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ಖಾತೆ
ಎಸ್ ಅಂಗಾರ – ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಖಾತೆ
ಬಸವರಾಜ್ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಖಾತೆ
ಜೆಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಖಾತೆ
ಸಿಸಿ ಪಾಟೀಲ್ – ಸಣ್ಣ ಕೈಗಾರಿಕಾ ಖಾತೆ, ವಾರ್ತಾ ಮತ್ತು ಸಂಪರ್ಕ ಖಾತೆ
ಅರವಿಂದ ಲಿಂಬಾವಳಿ – ಅರಣ್ಯ ಖಾತೆ
ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ ಖಾತೆ
ಎಂ.ಟಿ.ಬಿ.ನಾಗರಾಜ್ – ಅಬಕಾರಿ ಖಾತೆ
ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಹಿಂದುಳಿದ ವರ್ಗಗಳ ಖಾತೆ
ಡಾ.ಕೆ.ಸುಧಾಕರ್ – ಆರೋಗ್ಯ ಖಾತೆ
ಆನಂದ್ ಸಿಂಗ್ – ಪ್ರವಾಸೋದ್ಯಮ
ಸಿಪಿ ಯೋಗೀಶ್ವರ್ – ಸಣ್ಣ ನೀರಾವರಿ ಖಾತೆ
ಪ್ರಭು ಚೌವ್ಹಾಣ್ – ಪಶು ಸಂಗೋಪನಾ ಸಚಿವರ ಖಾತೆ
ಶಿವರಾಂ ಹೆಬ್ಬಾರ್ – ಕಾರ್ಮಿಕ ಖಾತೆ
ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ ಸಚಿವರ ಖಾತೆ
ಕೆ ಗೋಪಾಲಯ್ಯ – ತೋಟಗಾರಿಕಾ ಖಾತೆ, ಸಕ್ಕರೆ ಖಾತೆ
ಕೆಸಿ ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಢಾ ಸಬಲೀಕರಣ ಖಾತೆ
