ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ – ಅದಲು ಬದಲು ಮಾಡಿ ಖಾತೆ ಹಂಚಿಕೆ – ಹಲವರಲ್ಲಿ ಅಸಮಾಧಾನ

Suddi Sante Desk

ಬೆಂಗಳೂರು –

ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಈಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಹಾಲಿ ಸಚಿವರ ಖಾತೆಗಳ ಅದಲು-ಬದಲು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯ ಫೈನಲ್ ಪಟ್ಟಿಗೆ ರಾಜ್ಯ ಪಾಲರು ಅಂಕಿತ ಹಾಕಿದ್ದಾರೆ.ಸಚಿವರ ಪಟ್ಟಿಯನ್ನು ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯದ ನೂತನ ಸಚಿವರ ಖಾತೆಗಳು, ಹಾಲಿ ಸಚಿವರ ಖಾತೆಗಳ ಅದಲು – ಬದಲು ಸಂಪೂರ್ಣ ಪಟ್ಟಿ ಇಂತಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ – ಡಿಪಿಎಆರ್, ಕ್ಯಾಬಿನೆಟ್ ಅಫೈರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಎನರ್ಜಿ, ಗುಪ್ತಚರ, ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಅಂಡ್ ಸ್ಟಾಟಿಸ್ಟಿಕ್ಸ್, ಇನ್ಫಾಸ್ಟ್ರಕ್ಚರ್ ಡೆವೆಲ್ಮೆಂಟ್

ಉಮೇಶ್ ಕತ್ತಿ – ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ಖಾತೆ

ಎಸ್ ಅಂಗಾರ – ಮೀನುಗಾರಿಕೆ ಮತ್ತು ಬಂದರು, ಒಳನಾಡು ಸಾರಿಗೆ ಖಾತೆ

ಬಸವರಾಜ್ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಖಾತೆ

ಜೆಸಿ ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಖಾತೆ, ಕನ್ನಡ ಮತ್ತು ಸಂಸ್ಕೃತಿ ಖಾತೆ

ಸಿಸಿ ಪಾಟೀಲ್ – ಸಣ್ಣ ಕೈಗಾರಿಕಾ ಖಾತೆ, ವಾರ್ತಾ ಮತ್ತು ಸಂಪರ್ಕ ಖಾತೆ

ಅರವಿಂದ ಲಿಂಬಾವಳಿ – ಅರಣ್ಯ ಖಾತೆ

ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ ಖಾತೆ

ಎಂ.ಟಿ.ಬಿ.ನಾಗರಾಜ್ – ಅಬಕಾರಿ ಖಾತೆ

ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಹಿಂದುಳಿದ ವರ್ಗಗಳ ಖಾತೆ

ಡಾ.ಕೆ.ಸುಧಾಕರ್ – ಆರೋಗ್ಯ ಖಾತೆ

ಆನಂದ್ ಸಿಂಗ್ – ಪ್ರವಾಸೋದ್ಯಮ

ಸಿಪಿ ಯೋಗೀಶ್ವರ್ – ಸಣ್ಣ ನೀರಾವರಿ ಖಾತೆ

ಪ್ರಭು ಚೌವ್ಹಾಣ್ – ಪಶು ಸಂಗೋಪನಾ ಸಚಿವರ ಖಾತೆ

ಶಿವರಾಂ ಹೆಬ್ಬಾರ್ – ಕಾರ್ಮಿಕ ಖಾತೆ

ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ ಸಚಿವರ ಖಾತೆ

ಕೆ ಗೋಪಾಲಯ್ಯ – ತೋಟಗಾರಿಕಾ ಖಾತೆ, ಸಕ್ಕರೆ ಖಾತೆ

ಕೆಸಿ ನಾರಾಯಣ ಗೌಡ – ಯುವಜನ ಸೇವೆ ಮತ್ತು ಕ್ರೀಢಾ ಸಬಲೀಕರಣ ಖಾತೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.