ಮತ್ತೆ ಶಿಕ್ಷಕರ ವರ್ಗಾವಣೆ ಮುಂದೂಡಿಕೆ – ಸಮಸ್ಯೆಯಾದರೂ ಏ‌ನು ಪರಿಹಾರ ಮಾಡಿ ಪದೇ ಪದೇ ಹೀಗ್ಯಾಕೆ ಗೋಳು…..

Suddi Sante Desk

ಬೆಂಗಳೂರು –

ಇಂದಿನಿಂದ ಆರಂಭ ವಾಗಿ ನಡೆಯಬೇಕಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಯನ್ನು ಮತ್ತೆ ಮುಂದೂಡಿಕೆ ಮಾಡ ಲಾಗಿದೆ‌‌.ಹೌದು ವರ್ಗಾವಣೆ ಇದೆ ಎಂದುಕೊಂಡು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಹೋಗಿ ಶಿಕ್ಷಕರ ಭವನಕ್ಕೆ ತೆರಳಿದ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಅದೆಷ್ಟೋ ಶಿಕ್ಷಕರಿಗೆ ಮತ್ತೆ ಇಲಾಖೆ ನಿರಾಶೆಯನ್ನು ಮಾಡಿದೆ ತಾಂತ್ರಿಕ ಕಾರಣದಿಂದಾಗಿ ಈ ಒಂದು ಪ್ರಕ್ರಿಯೆ ಯನ್ನು ಮುಂದೂಡಿಕೆ ಮಾಡಲಾಗಿದೆ.

ಈ ಒಂದು ವಿಚಾರ ಕುರಿತು ವರ್ಗಾವಣೆ ಗೆ ತೆರಳಿದ್ದ ಸಾಕಷ್ಟು ಪ್ರಮಾಣದಲ್ಲಿನ ಶಿಕ್ಷಕರು ಪರದಾಡಿದ್ದು ಅಲ್ಲದೇ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು

ಶಿಕ್ಷಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಂತೆ ಎಚ್ಚೇತ್ತು ಕೊಂಡು ಇಲಾಖೆಯ ಅಧಿಕಾರಿಗಳು ಕೂಡಲೇ ವರ್ಗಾ ವಣೆ ಪ್ರಕ್ರಿಯೆ ಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಪ್ರಕಟಣೆ ಮಾಡಿದರು ಅಲ್ಲದೇ ಶೀಘ್ರದಲ್ಲೇ ಹೊಸ ದಿನಾಂಕ ವನ್ನು ಘೋಷಣೆ ಮಾಡೊದಾಗಿ ಹೇಳಿದರು ಒಟ್ಟಾರೆ ವರ್ಗಾವಣೆ ಪ್ರಕ್ರಿಯೆ ಯನ್ನು ಸಧ್ಯ ಮತ್ತೆ ತಾಂತ್ರಿಕ ಕಾರಣದಿಂದ ಮುಂದೂಡಿಕೆ ಮಾಡಲಾಗಿದ್ದು ಸಮಸ್ಯೆ ಯಾದರು ಏನು ಯಾಕೇ ಹೀಗೆ ಮಾಡಲಾಗುತ್ತಿದೆ ಇದಕ್ಕೆ ಮುಂದೂಡಿಕೆ ಮಾಡಿದವರೇ ಉತ್ತರಿಸಬೇಕು ಇನ್ನೂ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಶಿಕ್ಷಕರ ನೋವು ಕೇಳೊರಿಲ್ಲ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.