ತಿದ್ದುಪಡಿ‌ಯಾಯಿತು ಶಿಕ್ಷಕರ ವರ್ಗಾವಣೆ ಕಾಯ್ದೆ ಬಹು ನಿರೀಕ್ಷಿತ ರಾಜ್ಯ ಸಿವಿಲ್‌ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಅಧಿನಿಯಮ- 2022 ರಲ್ಲಿ ಏನೇನಿದೆ ಗೊತ್ತಾ

Suddi Sante Desk
ತಿದ್ದುಪಡಿ‌ಯಾಯಿತು ಶಿಕ್ಷಕರ ವರ್ಗಾವಣೆ ಕಾಯ್ದೆ ಬಹು ನಿರೀಕ್ಷಿತ ರಾಜ್ಯ ಸಿವಿಲ್‌ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಅಧಿನಿಯಮ- 2022 ರಲ್ಲಿ ಏನೇನಿದೆ ಗೊತ್ತಾ

ಬೆಂಗಳೂರು

 

ತಿದ್ದುಪಡಿ‌ಯಾಯಿತು ಶಿಕ್ಷಕರ ವರ್ಗಾವಣೆ ಕಾಯ್ದೆ ಬಹು ನಿರೀಕ್ಷಿತ ರಾಜ್ಯ ಸಿವಿಲ್‌ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಅಧಿನಿಯಮ  2022 ರಲ್ಲಿ ಏನೇನಿದೆ ಗೊತ್ತಾ  ಸರ್ಕಾರ ಅಧಿಸೂಚನೆ ಹೊರಡಿಸಿದೆ ಬಹುನಿರೀ ಕ್ಷಿತ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿ ಯಮ- 2022ಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

 

ಬಹುನಿರೀಕ್ಷಿತ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿ ಯಮ- 2022ಕ್ಕೆ ಗುರುವಾರ ಸರ್ಕಾರ ಅಧಿಸೂ ಚನೆ ಹೊರಡಿಸಿದೆ. ಹೌದು ಈ ಒಂದು ಅಧಿಸೂಚ ನೆಯಿಂದ ಇನ್ಮುಂದೆ ಶಿಕ್ಷಕರು ತಮ್ಮ ಪ್ರತಿ ಮೂರು ವರ್ಷಕ್ಕೊಮ್ಮೆ ಪರಸ್ಪರ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿ ವರ್ಗಾವಣೆ ಹೊಂದಬಹುದಾಗಿದೆ ಈ ಮೊದಲು ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇತ್ತು.ಆದರೆ ಸೇವೆಯ ಆರಂಭದ ಐದು ವರ್ಷ ಮತ್ತು ನಿವೃತ್ತಿಗೆ ಮುಂಚಿನ ಐದು ವರ್ಷ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

 

ಇದಲ್ಲದೆ ಒಂದೇ ತಾಲೂಕಿನಲ್ಲಿ ಪತಿ-ಪತ್ನಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಶಿಕ್ಷಕನು ಆತನ ಪತ್ನಿ ಅಥವಾ ಆಕೆಯ ಪತಿಯು ಬೇರೆ ಬೇರೆ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಆ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಲಭ್ಯವಿರುವ ಖಾಲಿ ಸ್ಥಾನಕ್ಕೆ ವರ್ಗಾವಣೆ ಕೋರಲು ಅನುಮತಿ ನೀಡಲಾಗಿದೆ. ಆದರೆ ಈ ಮೊದಲೇ ಇಬ್ಬರೂ ಅದೇ ತಾಲೂಕಿ ನಲ್ಲಿ ಕಾರ್ಯ ನಿರ್ವಹಿಸುತಿದ್ದರೆ, ಆಗ ಆದ್ಯತೆ ಅಡಿ ಅರ್ಜಿ ಸಲ್ಲಿಸಲು ಅವರು ಅರ್ಹರಿರುವು ದಿಲ್ಲ

 

ಇನ್ನೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳು (377 ಜೆ ಅನ್ವಯ) ಮಲೆನಾಡು ವಲಯ ಹಾಗೂ ನಂಜುಂ ಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದು ಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗಬಯಸುವವರಿಗೆ ವಿಶೇಷ ಆದ್ಯತೆ ಸಿಗಲಿದೆ.ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ. 11ರಷ್ಟು ಮಿತಿಇರುತ್ತದೆ ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವ ವರಿಗೆ ಈ ನಿಯಮ ಅನ್ವಯವಾಗದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಬಹುತೇಕ ಉಳಿದೆಲ್ಲ ನಿಯಮಗಳು ಮುಂದುವರಿಯಲಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.