ಕ್ಷೇತ್ರದ ಜನರ ಪ್ರೀತಿಯಲ್ಲಿ ಮಿಂದೆದ್ದ ಅಮೃತ ದೇಸಾಯಿ – ಅಮೃತ ದೇಸಾಯಿಗೆ ಎಲ್ಲೇಡೆ ಕಂಡು ಬರುತ್ತಿದೆ ಅಭೂತಪೂರ್ವ ಬೆಂಬಲ…..

Suddi Sante Desk
ಕ್ಷೇತ್ರದ ಜನರ ಪ್ರೀತಿಯಲ್ಲಿ ಮಿಂದೆದ್ದ ಅಮೃತ ದೇಸಾಯಿ – ಅಮೃತ ದೇಸಾಯಿಗೆ ಎಲ್ಲೇಡೆ ಕಂಡು ಬರುತ್ತಿದೆ ಅಭೂತಪೂರ್ವ ಬೆಂಬಲ…..

ಧಾರವಾಡ

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಧಾರವಾಡ 71 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಧಾರವಾಡ ತಾಲೂಕಿನ ಕಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು ಪಾದಯಾತ್ರೆ ಮೂಲಕ ಗ್ರಾಮದ ಎಲ್ಲಾ ಗ್ರಾಮ ಸ್ಥರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು

ಬಿಜೆಪಿ ಪಕ್ಷದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅವರಿಗೆ ತಿಳಿಸಿ ಗ್ರಾಮದ ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸಿ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದು ಮತಯಾಚನೆ ಮಾಡಿದರು

ಈ ಸಂಧರ್ಭದಲ್ಲಿ ಶ್ರೀಮತಿ ಸೀಮಾ ಮಸೂತಿ, ಶ್ರೀಮತಿ ಸವಿತಾ ಅಮರಶೆಟ್ಟಿ, ಶ್ರೀ ಗಂಗಾಧರ್ ಪಾಟೀಲ್ ಕುಲಕರ್ಣಿ,ಶ್ರೀ ಗುರುನಾಥ್ ಗೌಡ ಗೌಡರ ಹಾಗೂ ಶಶಿಮೌಳಿ ಕುಲಕರ್ಣಿ ಹಾಗೂ ಸಂಗನಗೌಡ ರಾಮನಗೌಡರ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.