This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

CM ಜೊತೆಯಲ್ಲಿ ನಡೆಯಿತು NPS ನೌಕರರ ಮಹತ್ವದ ಸಭೆ – OPS ಜಾರಿಗೆ ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ನೀಡಿದ ನೆಮ್ಮದಿಯ ಸುದ್ದಿ……

CM ಜೊತೆಯಲ್ಲಿ ನಡೆಯಿತು NPS ನೌಕರರ ಮಹತ್ವದ ಸಭೆ – OPS ಜಾರಿಗೆ ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ನೀಡಿದ ನೆಮ್ಮದಿಯ ಸುದ್ದಿ……
WhatsApp Group Join Now
Telegram Group Join Now

ಬೆಂಗಳೂರು

CM ಜೊತೆಯಲ್ಲಿ ನಡೆಯಿತು NPS ನೌಕರರ ಮಹತ್ವದ ಸಭೆ – OPS ಜಾರಿಗೆ ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ನೀಡಿದ ನೆಮ್ಮದಿಯ ಸುದ್ದಿ

ಹಳೆ ಪಿಂಚಣಿ ಯೋಜನೆ ರದ್ದು ಮಾಡುವ ವಿಚಾರದಲ್ಲಿ ರಾಜ್ಯದ ಎನ್ ಪಿ ಎಸ್ ನೌಕರರು ಮತ್ತು ಸಂಘಟನೆಯ ಮುಖಂಡರು ಸಿಎಮ್ ಜೊತೆ ಮಹತ್ವದ ಸಭೆಯನ್ನು ಮಾಡಿದರು.ಹೌದು ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ಮಾಡುವ ಕುರಿತಂತೆ

ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರೊಂದಿಗೆ ಕರ್ನಾಟಕದ ಸರ್ಕಾರಿ ನೌಕರರು ಸಭೆ ಮಾಡಿ ಕೆಲ ವಿಚಾರ ಕುರಿತಂತೆ ಚರ್ಚೆಯನ್ನು ಮಾಡಿದರು. ಬೆಂಗಳೂರಿನಲ್ಲಿ ಸಿದ್ದರಾಮಯ್ಯನವ ಗೃಹ ಕಛೇರಿ “ಕೃಷ್ಣ” ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘಟನೆ ಹಾಗೂ ರಾಜ್ಯ ಪ್ರಾಥ ಮಿಕ ಶಿಕ್ಷಣ ಸಂಘದ ಪದಾಧಿಕಾರಿಗಳೊಂದಿಗೆ ಸಚಿವಾಲಯದ ಪದಾಧಿಕಾರಿಗಳೊಂದಿಗೆ NPS ರದ್ಧತಿ ವಿಚಾರವಾಗಿ ವಿಶೇಷ ಸಭೆಯನ್ನು ಆಯೋ ಜಿಸಲಾಗಿತ್ತು.

ಮುಖ್ಯಮಂತ್ರಿಗಳೊಂದಿಗೆ ಜರುಗಿದ ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ.)ಬೆಂಗಳೂರು ರಾಜ್ಯಾಧ್ಯಕ್ಷ ರಾದ ಶಾಂತರಾಮ ತೇಜಾ ರವರ ನೇತೃತ್ವದಲ್ಲಿ ಸಚಿವಾಲಯದ ನೌಕರರ ಪ್ರತಿನಿಧಿಗಳು ಹಾಗೂ ಸಚಿವಾಲಯ ಕ್ಲಬ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ. ಗುರುಸ್ವಾಮಿರವರು, ಸಚಿವಾ ಲಯ ಕ್ಲಬ್ ನ ಗೌರವ ಕಾರ್ಯದರ್ಶಿಗಳಾದ ನಾಗಭೂಷಣ್ ರವರು ರವರು,

ಸಚಿವಾಲಯದ ಪದಾಧಿಕಾರಿಗಳಾದ ಮಾರುತಿ ಎಸ್.ಒಣವೆ ರವರು ಹಾಗೂ ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ನಾಗೇಶ್ ರವರು ಹಾಗೂ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಶಿವರುದ್ರಯ್ಯ ನವರು ಮತ್ತು ರಾಜ್ಯದ NPS ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು ಈ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದರು

ಪಾಲ್ಗೊಂಡು.

NPS ರದ್ದತಿಯ ಕುರಿತಂತೆ ಚರ್ಚಿಸಿದರು. ಮುಖ್ಯ ಮಂತ್ರಿಗಳು OPS ಜಾರಿ ಮಾಡುವ ಕುರಿತು ಶೀಘ್ರದಲ್ಲಿಯೇ ಬೃಹತ್ ಸಮಾವೇಶ ಆಯೋಜಿ ಸುವಂತೆ ತಿಳಿಸಿದರು ಶೀಘ್ರದಲ್ಲಿಯೇ ಸಮಾವೇ ಶದ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿ ಸದರಿ ಸಮಾವೇಶದಲ್ಲಿ NPS ನ್ನು ರದ್ದು ಗೊಳಿಸಿ OPS ನ್ನು ಜಾರಿಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ಮತ್ತು ಯಾವುದೇ ಅನುಮಾನವೇ ಬೇಡ ಎಂದು ಸಕಾರಾತ್ಮಕವಾಗಿ ಸಂದೇಶ ನೀಡಿದರು

ರಾಜ್ಯ ಸರ್ಕಾರಿ ನೌಕರರಿಗೆ ನೀಡಿರುವ NPS ರದ್ಧತಿಯ ಭರವಸೆಯನ್ನು ಈಡೇರಿಸುವುದಾಗಿ ತಿಳಿಸಿದರು ಈ ಮೂಲಕ ರಾಜ್ಯದ ಸಮಸ್ತ ಕರ್ನಾಟಕದ NPS ನೌಕರರ ಜೀವನದ ಭದ್ರತೆಗೆ ನ್ಯಾಯವನ್ನು ಒದಗಿಸಲಾಗುವುದು ಎಂದು ಈ ಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ನೌಕರರ ಸಂಘಟನೆಯ ನಾಯಕರು ಕರ್ನಾಟಕ ರಾಜ್ಯ NPS ನೌಕರರ ಸಂಘದ ಹೋರಾಟಕ್ಕೆ ಜಯವಾಗಲಿ ಎನ್ನುತ್ತಾ ತೆರಳಿದರು ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಎಂಬ ಮಾತಿಗೆ ಇವತ್ತಿನ ಮುಖ್ಯಮಂತ್ರಿಯವರೊಂದಿಗೆ ಸಭೆ ಒಂದಿಷ್ಟು ಸಂತೋಷವನ್ನುಂಟು ಮಾಡಿತು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk