ಸರ್ಕಾರಿ ನೌಕರರ ಪ್ರತಿನಿಧಿ ಗಳೊಂದಿಗೆ ನಾಳೆ CM ಮಹತ್ವದ ಸಭೆ – ವೇತನ ಆಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ….‌.

Suddi Sante Desk

ಬೆಂಗಳೂರು –

ಬಜೆಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಇಲಾಖೆಗಳೊಂದಿಗೆ ಸಭೆಯನ್ನು ಮಾಡುತ್ತಿದ್ದು ಇನ್ನೂ ನಾಳೆ ಅಂದರೆ ಫೆಬ್ರುವರಿ 22 ರಂದು ರಾಜ್ಯದ ಸರ್ಕಾರಿ ನೌಕರರ ಸಂಘಟನೆಯ ಪ್ರತಿನಿಧಿ ಗಳೊಂದಿಗೆ ಸಭೆಯನ್ನು ಮಾಡಲಿದ್ದಾರೆ

ಹೌದು ಮಧ್ಯಾಹ್ನ 1 ಗಂಟೆಯಿಂದ 1 30 ರವರೆಗೆ ವಿಧಾನ ಸೌಧ ದ ಮೂರನೇಯ ಕೊಠಡಿಯಲ್ಲಿ ಸಭೆಯನ್ನು ನಡೆಸ ಲಿದ್ದು ಪ್ರಮುಖವಾಗಿ ಕೇಂದ್ರ ಸರ್ಕಾರದ ಮಾದರಿಯಲ್ಲಿ 7 ನೇ ವೇತನ ನೀಡುವ ಬಗ್ಗೆ ಹಾಗೆ ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೆಲವೊಂದಿಷ್ಟು ಯೋಜನೆ ಮತ್ತು ಇತರೆ ವಿಚಾರ ಗಳ ಬಗ್ಗೆ ಚರ್ಚೆ ನಡೆಯಲಿದ್ದು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈ ಒಂದು ಸಭೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿ ಬೇಡಿಕೆಗಳ ಪಟ್ಟಿಯನ್ನು ನೀಡಲಿದ್ದಾರೆ.

ಹೀಗಾಗಿ ನಾಳೆಯ ಈ ಒಂದು ಸಭೆ ತೀವ್ರವಾಗಿ ಕುತೂಹಲ ವನ್ನು ಕೆರಳಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.